ಅಧಿಕಾರಿಗಳ ಕಾರ್ಯವೈಖರಿಗೆ ಮನಗೂಳಿ ಬೇಸರ

493

ಇಂಡಿ: ಶಾಸಕ ಎಂ.ಸಿ ಮನಗೂಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿಂದು ಪ್ರಗತಿ ಪರಿಶೀಲನೆ ಸಭೆ ನಡೆಸಿದ್ರು. ಸಿಂದಗಿ ವಿಧಾನಸಭಾ ಮತಕ್ಷೇತ್ರದ ಶಾಸಕರಾಗಿರುವ ಎಂ ಸಿ ಮನಗೂಳಿ ಅವರ ಕ್ಷೇತ್ರ ವ್ಯಾಪ್ತಿಗೆ ಇಂಡಿ ಭಾಗದ 7 ಗ್ರಾಮಗಳು ಬರುತ್ತವೆ. ಹೀಗಾಗಿ ಈ ಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ರು.

ಈ ವೇಳೆ ಮಾತ್ನಾಡಿದ ಅವರು, ನನ್ನ ಕ್ಷೇತ್ರದ ವ್ಯಾಪ್ತಿಗೆ 7 ಗ್ರಾಮಗಳು ಬರುತ್ತವೆ. ಅಧಿಕಾರಿಗಳು ಮಲತಾಯಿ ಧೋರಣೆ ಮಾಡ್ತಿದ್ದಾರೆಂದು ಸಾರ್ವಜನಿಕರಿಂದ ಆರೋಪ ಕೇಳಿ ಬಂದಿದೆ ಅಂತಾ ಹೇಳಿದ್ರು. ಗ್ರಾಮದಲ್ಲಿ ಅತೀ ಅವಶ್ಯಕತೆಯಿರುವ ಮೂಲ ಸೌಕರ್ಯಗಳ ಸಮಸ್ಯೆ ಹೆಚ್ಚಿದೆ. ಸ್ವಲ್ಪ ದಿನಗಳಲ್ಲಿಯೇ ನೀರಿನ ಹಾಹಾಕಾರ ಉಂಟಾಗುತ್ತೆ. ಇದಕ್ಕೆ ಕ್ರಮವೇನು ಅಂತಾ ಸಂಬಂಧಪಟ್ಟ ಅಧಿಕಾರಿಗಳನ್ನ ಪ್ರಶ್ನಿಸಿದ್ರು.

ಜಿಲ್ಲಾ ಪಂಚಾಯತ್ ಮತ್ತು ಪಿಡಬ್ಲ್ಯೂಡಿ ವ್ಯಾಪ್ತಿಗೆ ಬರುವ ಎಲ್ಲಾ ರಸ್ತೆಗಳು ಅಪೂರ್ಣವಾಗಿವೆ. ರೈತರಿಗೆ ವಿದ್ಯುತ್ ಹಾಗೂ ಟ್ರಾನ್ಸ್ ಫಾರ್ಮರ್ ಕೊಡುವಲ್ಲಿ ವಿಳಂಬವಾಗ್ತಿದೆ. ಅಲ್ದೇ, ಸಣ್ಣ ನೀರಾವರಿ ಇಲಾಖೆಯ ಕಾರ್ಯ ನನ್ಗೆ ಅತೃಪ್ತಿ ತಂದಿದೆ ಅಂತಾ ಬೇಸರ ವ್ಯಕ್ತಪಡಿಸಿದ್ರು. ಸಭೆಯಲ್ಲಿ ತಾಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ರು.




Leave a Reply

Your email address will not be published. Required fields are marked *

error: Content is protected !!