ವರದಿಗಾರರೆಂದು ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದ ಮೂವರ ಬಂಧನ

273

ಪ್ರಜಾಸ್ತ್ರ ಅಪರಾಧ ಸುದ್ದಿ

ಕಲಬುರಗಿ: ಸುದ್ದಿ ವಾಹಿನಿಯ ವರದಿಗಾರರು ಎಂದು ಸುಳ್ಳು ಹೇಳಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದ ಮೂವರನ್ನ ಜೇವರ್ಗಿ ಪೊಲೀಸರು ಬಂಧಿಸಿದ್ದಾರೆ. ಗುಂಡು ಗುತ್ತೇದಾರ, ರವಿಚಂದ್ರ ಗುತ್ತೇದಾರ ಹಾಗೂ ಗಿರೀಶ ತುಂಬಗಿ ಬಂಧಿತ ಆರೋಪಿಗಳಾಗಿದ್ದಾರೆ.

ಜೇವರ್ಗಿ ಹೊರವಲಯದಲ್ಲಿ ಲಾರಿಯೊಂದನ್ನ ನಿಲ್ಲಿಸಿ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡ್ತೀರುವೆ. ಹಣ ಕೊಡದೆ ಹೋದ್ರೆ ನ್ಯೂಸ್ ಚಾನೆಲ್ ನಲ್ಲಿ ಸುದ್ದಿ ಮಾಡ್ತೀವಿ ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ಆತನಿಂದ 3.50 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ. ಲಾರಿ ಚಾಲಕ ಸಂದೀಪ ರಾಥೋಡ ಠಾಣೆಯಲ್ಲಿ ದೂರು ನೀಡಿದ್ದ.

ಪ್ರಕರಣ ದಾಖಲಿಸಿಕೊಂಡ ಜೇವರ್ಗಿ ಠಾಣೆ ಪೊಲೀಸರು ಮೂವರನ್ನ ಬಂಧಿಸಿದ್ದಾರೆ. ಯಾದಗಿರಿಯಿಂದ ಬೀದರ ಜಿಲ್ಲೆಗೆ ಅಕ್ಕಿ ಸಾಗಿಸುವಾಗ ಈ ಮೂವರು ಹೆದರಿಸಿ ಹಣ ವಸೂಲಿ ಮಾಡಿದ್ರು.




Leave a Reply

Your email address will not be published. Required fields are marked *

error: Content is protected !!