ಸಿಂದಗಿ: ತಾಲೂಕಿನ ಬಂದಾಳ ಗ್ರಾಮದಲ್ಲಿಂದು ಮಂಗವೊಂದು ಸಾವನ್ನಪ್ಪಿತ್ತು. ಇದನ್ನ ನೋಡಿದ ಗ್ರಾಮಸ್ಥರು ಧಾರ್ಮಿಕ ವಿಧಿವಿಧಾನಗಳನ್ನ ಮಾಡಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಮೃತಕೋತಿಗೆ ಪೂಜೆ ಮಾಡಿ ಟಂಟಂ ವಾಹನದಲ್ಲಿ ಮೆರವಣೆಗೆ ಮಾಡಿಕೊಂಡು ಹೊಸ ನಗರದಲ್ಲಿ ಅಂತ್ಯಕ್ರಿಯೆ ಮಾಡುವ ಮೂಲಕ ಮಾನವೀಯತೆ ಮೆರೆಯಲಾಗಿದೆ. ಈ ವೇಳೆ ಗ್ರಾಮಸ್ಥರಾದ ಮುತ್ತಪ್ಪ ಪೂಜಾರಿ, ಮಾಳಿಂಗರಾಯ ಮಗ್ಗದ, ಶರಣಪ್ಪ ಮಾದರ, ನಬಿರೂಸುಲ್ ಬೆಕಿನಾಳ, ಶ್ರೀಶೈಲ ಉಕ್ಕಲಿ, ಕುಮಾರ ಬೇಡರ ಸೇರಿದಂತೆ ಅನೇಕರು ಭಾಗವಹಿಸಿದ್ರು.