ತಾಯಿ, ಮೂವರ ಮಕ್ಕಳ ಸಾವು ಪ್ರಕರಣ: ಮೂವರ ಬಂಧನ

308

ಪ್ರಜಾಸ್ತ್ರ  ಸುದ್ದಿ

ವಿಜಯಪುರ: ತಿಕೋಟ ತಾಲೂಕಿನ ತೊರವಿ ತಾಂಡ 1ರಲ್ಲಿ ತಾಯಿ, ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ಸಂಬಂಧ ಪತಿ, ಆತನ ಸಹೋದರ ಹಾಗೂ ತಂದೆಯನ್ನು ವಿಜಯಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೃತ ಅನಿತಾ ಜಾಧವ್ ಪತಿ ಪಿಂಟು, ಸಹೋದರ ವಿಠಲ್, ತಂದೆ ಧರ್ಮು ಎಂಬುವವರನ್ನು ಬಂಧಿಸಲಾಗಿದೆ. ಕಳೆದ ಜೂನ್ 15ರಂದು ಅನಿತಾ ಜಾಧವ್(27), ಮಕ್ಕಳಾದ ಪ್ರವೀಣ್(6), ಸಂದೀಪ್(4), ಮಮದಿಕಾ(2)ನೊಂದಿಗೆ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.




Leave a Reply

Your email address will not be published. Required fields are marked *

error: Content is protected !!