ಸಂಸದ-ಶಾಸಕರ ನಡುವಿನ ಮಾತಿನ ಚಕಮಕಿ: ಜಿಲ್ಲೆಯಾದ್ಯಂತ ಚರ್ಚೆ

481

ವಿಜಯಪುರ: ಸಂಸದ ರಮೇಶ ಜಿಗಜಿಣಗಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಡುವಿನ ವಾಕ್ಸಮರ ಮಂಗಳವಾರ ವೇದಿಕೆ ಮೇಲೆಯೇ ನಡೆದಿದೆ. ಅದು ಇದೀಗ ಎಲ್ಲೆಡೆ ವೈರಲ್ ಆಗ್ತಿದೆ. ಯಶವಂತಪುರ-ವಿಜಯಪುರ ನಡುವಿನ ನೂತನ ರೈಲು ಉದ್ಘಾಟನೆ ವೇಳೆ ವೇದಿಕೆ ಮೇಲೆಯೇ ಮಾತಿನ ಚಕಮಕಿ ನಡೆದಿದೆ.

ಜಾಹೀರಾತು

ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ ಜೊತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಜನರ ಸಮಸ್ಯೆ ಬಗೆಹರಿಸಲು ತಮ್ಗೆ ಹೆಚ್ಚಿನ ಜವಾಬ್ದಾರಿ ನೀಡುವಂತೆ ಅವರನ್ನ ಕೇಳುವಾಗ, ಸಂಸದ ರಮೇಶ ಜಿಗಜಿಣಗಿ ಮಧ್ಯಪ್ರವೇಶ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರಂತೆ. ಇದ್ರಿಂದ ಸಿಟ್ಟಿಗೆದ್ದ ಶಾಸಕ, ಸಂಸದರಿಗೆ ಬೇಡ ಅನ್ನಲು ನೀವ್ಯಾರು ಎಂದು ಹೇಳಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ವೇದಿಕೆ ಮೇಲೆ ಸ್ವಪಕ್ಷೀಯ ನಾಯಕರಿಬ್ಬರ ವಾಕ್ಸರವನ್ನ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಹಾಗೂ ಕೇಂದ್ರ ಸಚಿವ ಸರೇಶ ಅಂಗಡಿ ಇವರನ್ನ ಸಮಾಧನ ಮಾಡುವ ಮೂಲಕ, ಘಟನೆಯನ್ನ ದೀರ್ಘಕ್ಕೆ ಹೋಗದಂತೆ ನೋಡಿಕೊಂಡಿದ್ದಾರೆ. ಇದು ಜಿಲ್ಲೆಯ ತುಂಬಾ ವ್ಯಾಪಕ ಚರ್ಚೆಯಾಗ್ತಿದೆ.




Leave a Reply

Your email address will not be published. Required fields are marked *

error: Content is protected !!