ನಟ ಹಾಗೂ ರಾಜಕಾರಣಿ ಪ್ರಕಾಶ ರೈ ಇದೀಗ ಮತ್ತೊಂದು ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಖಾಸಗಿ ಟಿವಿಯ ಚರ್ಚೆಯ ವೇಳೆ ಸಾರ್ವಜನಿಕ ಆಚರಣೆಯಾದ ರಾಮಲೀಲಾ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡುವ ಭರದಲ್ಲಿ ವಿವಾದ ಮಾಡಿಕೊಂಡಿದ್ದಾರೆ. ಈ ಸುದ್ದಿ ವ್ಯಾಪಕ ಚರ್ಚೆಯಾಗ್ತಿದೆ.
ಪ್ರಜಾಪ್ರಭುತ್ವ ದೇಶದಲ್ಲಿ ಇನ್ನೊಬ್ಬರ ಭಾವನೆಯ ಬಗ್ಗೆ ಮಾತ್ನಾಡುವುದು ತಪ್ಪಲ್ಲವೇ ಅನ್ನೋ ಪ್ರಶ್ನೆಗೆ, ಮಕ್ಕಳು ಪೋರ್ನ್ ಸೈಟ್ ನೋಡ್ತಿದ್ದರೆ ಸುಮ್ಮನಿರಲು ಸಾಧ್ಯವೇ? ಎನ್ನುವ ಮೂಲಕ ರಾಮಲೀಲಾ ವಿಚಾರವನ್ನ ಪೋರ್ನ್ ಸೈಟ್ ಗೆ ಹೋಲಿಕೆ ಮಾಡಿದ್ದಾರೆ. ಈ ಮಾತು ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ರಾಮ, ಲಕ್ಷ್ಮಣ, ಸೀತೆ ಪಾತ್ರಧಾರಿಗಳನ್ನ ಹೆಲಿಕಾಪ್ಟರ್ ಮೂಲಕ ಕರೆದುಕೊಂಡು ಬರಲಾಗುತ್ತೆ. ಅವರ ಹಿಂದೆ ಐಎಎಸ್ ಆಫೀಸರ್ಸ್ ಫೈಲ್ ಹಿಡಿದುಕೊಂಡು ಬರ್ತಾರೆ. ಇದು ಸಂಸ್ಕೃತಿನಾ? ಇದು ಆಚರಣೆನಾ ಅಂತಾ ಹೇಳಿದ್ದಾರೆ.