ಪ್ರಜಾಸ್ತ್ರ ಅಪರಾಧ ಸುದ್ದಿ
ಶಿವಮೊಗ್ಗ: ಇವತ್ತಿನ ದುನಿಯಾದಲ್ಲಿ ಹಲ್ಲೆ, ಕೊಲೆ ಅನ್ನೋದು ನೀರಿ ಕುಡಿದಷ್ಟು ಸಲೀಸಾಗಿದೆ. ಹೀಗಾಗಿ ಸಂಬಂಧಗಳು ಅನ್ನೋದು ಕೊಲೆಯಲ್ಲಿ ಅಂತ್ಯವಾಗ್ತಿರುವುದು ನಿಜಕ್ಕೂ ಅಪಾಯದ ಸಂಕೇತ. ಇಲ್ಲೊಬ್ಬಳು ಅಕ್ರಮ ಸಂಬಂಧ ಇಟ್ಟುಕೊಂಡವನೊಂದಿಗೆ ಜಗಳವಾದಾಗ ದೂರವಾಗಿದ್ದಾಳೆ.
ಜಗಳ ಮಾಡಿಕೊಂಡು ದೂರವಾದ್ಳು, ಸುಮ್ಮನೆ ಇದ್ದಿದ್ರೆ ಒಂದು ಜೀವ ಉಳಿತಿತ್ತು. ಆದ್ರೆ, ಅವಳ ಮತ್ತೊಬ್ಬನ ಸಂಗ ಮಾಡಿ, ಇವನಿಗೆ ಮುಹೂರ್ತ ಇಟ್ಟಿದ್ಳು. ಇದ್ರಿಂದಾಗಿ 36 ವರ್ಷದ ರವೀಂದ್ರ ಅನ್ನೋ ವ್ಯಕ್ತಿ ಹೆಣವಾಗಿ ಹೋಗ್ತಾನೆ. ಈತನ ಮೃತದೇಹಕ ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಕುಸ್ಕೂರು ಗ್ರಾಮದ ಕೆರೆಯಲ್ಲಿ ಸೆಪ್ಟೆಂಬರ್ 24ರಂದು ಪತ್ತೆಯಾಗಿರುತ್ತೆ.
ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಹುಣವಳ್ಳಿ ಗ್ರಾಮದ ರವೀಂದ್ರ ಸಾವಿನ ಅಕ್ರಮದ ರಹಸ್ಯ ಹೊರ ಬರುತ್ತೆ. ಆಗ ಗೊತ್ತಾಗುವುದೆ ಮಂಜುಳ ಹಾಗೂ ತುಕ್ಕರಾಜು ಅನ್ನೋ ಇಬ್ಬರು. ಬಿದರಕೊಪ್ಪ ಮೂಲದ ಮಂಜುಳಾ ಹಾಗೂ ತುಕ್ಕರಾಜು ಸೇರಿಕೊಂಡು, ಹಳೆ ಸಂಗಾತಿ ರವಿಂದ್ರನನ್ನ ಕೊಲೆ ಮಾಡಿ ಕೆರೆಗೆ ಎಸೆಯಲಾಗಿದೆ ಎಂದು ಹೇಳಲಾಗ್ತಿದೆ. ಹೀಗಾಗಿ ಅಸ್ವಾಭಾವಿಕ ಸಾವು ಪ್ರಕರಣದಡಿಯಲ್ಲಿ ಇವರಿಬ್ಬರನ್ನ ಬಂಧಿಸಲಾಗಿದೆ.