ಬೆಳಗಾವಿ: ಕಾರ್ಮಿಕರಿಬ್ಬರನ್ನ ಹತ್ಯೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಕಿತ್ತೂರಿನ ಶಿವ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದೆ. ತಿಗಡೊಳ್ಳಿ ಗ್ರಾಮದ 30 ವರ್ಷದ ಮುಶ್ತಾಕ್ ಹಾಗೂ 28 ವರ್ಷದ ಲಿಂಗದಳ್ಳಿ ಗ್ರಾಮದ ಮಂಜುನಾಥ್ ಪಟ್ಟಣ್ ಶೆಟ್ಟಿ ಕೊಲೆಯಾದ ದುರ್ದೈವಿಗಳು.
ಸುದ್ದಿಗಾರರೊಂದಿಗೆ ಮಾತ್ನಾಡಿದ
ಪೊಲೀಸ್ ಅಧೀಕ್ಷಕ ಸುಧೀರ್ ಕುಮಾರ್ ರೆಡ್ಡಿ, ಧಾರವಾಡ-ಕಿತ್ತೂರು ಹಾಗೂ ಪುಣೆ-ಬೆಂಗಳೂರು
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಿವ ಪೆಟ್ರೋಲ್ ಪಂಪ್ ನಲ್ಲಿ ಈ ಘಟನೆ ನಡೆದಿದೆ ಅಂತಾ
ಹೇಳಿದ್ದಾರೆ. ಆಗುಂತಕರು ಕಾರ್ಮಿಕರಿಬ್ಬರನ್ನು ಕೊಲೆಗೈದು ಹಣ ದೋಚಿ ಪರಾರಿಯಾಗಿದ್ದಾರೆ ಎಂದು
ತಿಳಿಸಿದ್ದಾರೆ. ಈ ಬಗ್ಗೆ ಬೆಳಗಾವಿ ಪೋಲಿಸರು ತನಿಖೆ ನಡೆಸಿದ್ದಾರೆ.