ಧಾರವಾಡ: ಕಳೆದ ಎರಡು ದಿನಗಳ ಹಿಂದೆ ನಗರದ ಕಮಲಾಪುರ ಬಡಾವಣೆಯಲ್ಲಿ ನಡೆದಿದ್ದ ಮರ್ಡರ್ ದೃಶ್ಯ ಸಿಸಿಟಿಯಲ್ಲಿ ಸರೆಯಾಗಿದೆ. ಈ ಭಯಾನಕ ದೃಶ್ಯ ನೋಡಿದ್ರೆ ಎದೆ ಝಲ್ ಎನ್ನುತ್ತೆ. 39 ವರ್ಷದ ಉಮೇಶ ಬಾಳಗಿಯನ್ನ ಪತ್ನಿಯ ಕಣ್ಣೆದುರಲ್ಲೇ ಹತ್ಯೆ ಮಾಡಲಾಗಿದೆ.
ಮನೆಯಿಂದ ಬೈಕ್ನಲ್ಲಿ ಹೊರಟಿದ್ದ ಉಮೇಶ ಬಾಳಗಿಯನ್ನ, ಮನೆಯ ಪಕ್ಕದಲ್ಲಿಯೇ ಅಣ್ಣ ತಮ್ಮಂದಿರು ತಡೆದು ಪತ್ನಿಯ ಎದುರೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಪತಿಯ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಕಂಡು ಸಹಾಯಕ್ಕೆ ಪತ್ನಿ ಕೂಗಾಡಿದ್ದಾಳೆ. ಅಲ್ಲಿ ಸಹಾಯಕ್ಕೆ ಯಾರೂ ಇರ್ಲಿಲ್ಲ. ವಿಕಲಚೇತನ ಉಮೇಶ ಕೊಲೆಯಾಗಿ ಹೋಗಿದ್ದಾನೆ. ಬಳಿಕ ಪತ್ನಿ ಉಮಾ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾಗ, ಆಕೆ ಓಡಿ ಹೋಗಿ ಮನೆ ಲಾಕ್ ಮಾಡಿಕೊಂಡಿದ್ದಾಳೆ.
ಮೇ 15 ರಂದು ಕಮಲಾಪುರ ಬಡಾವಣೆಯಲ್ಲಿ ಈ ಭೀಕರ ಕೊಲೆ ನಡೆದಿದೆ. ಚೆನ್ನಬಸಪ್ಪ ಬಾಳಗಿ ಮತ್ತು ಬಸಪ್ಪ ಬಾಳಗಿ ಆಸ್ತಿಗಾಗಿ ತಮ್ಮನನ್ನೇ ಹಾರಿ ಹಾಗೂ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.