ಇಂಡಿಯಲ್ಲಿ ಓರ್ವನ ಕೊಲೆ

485

ಇಂಡಿ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಕೆಸರಾಳ ತಾಂಡ ವಾಪ್ತಿಯಲ್ಲಿ ಓರ್ವನನ್ನ ಕೊಲೆ ಮಾಡಲಾಗಿದೆ. ನ್ವಾಲರು ಸೇರಿಕೊಂಡು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಕೊಲೆಯಾದವನನ್ನ ಮಲ್ಲುರಾವು ರಾಠೋಡ ಎಂದು ಗುರುತಿಸಲಾಗಿದೆ.

ಕೆಸರಾಳ ತಾಂಡ ನಿವಾಸಿಯಾಗಿರುವ 50 ವರ್ಷದ ಮಲ್ಲುರಾವು ರಾಠೋಡ ಎಂಬಾತನನ್ನ ಇಂದು ಸಂಜೆ ಹತ್ಯೆ ಮಾಡಲಾಗಿದೆ. ಇಂಡಿ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಅನ್ನೋ ಶಂಕೆ ವ್ಯಕ್ತವಾಗಿದೆ.




Leave a Reply

Your email address will not be published. Required fields are marked *

error: Content is protected !!