ಸೇಡಂ: ಲಿಂಗೈಕ್ಯ ಶ್ರೀಮಾತೆ ಮಾಣಿಕೇಶ್ವರಿ ಅವರ ಆಸ್ತಿ ಕಬಳಿಸಲು ಸಂಚು ರೂಪಿಸಲಾಗಿದೆ ಅನ್ನೋ ಆರೋಪವೊಂದು ಕೇಳಿ ಬಂದಿದೆ. ಅಮ್ಮನವರ ಕುಟುಂಬಸ್ಥರು ಈ ಆರೋಪ ಮಾಡಿದ್ದು, ಶ್ರೀಮಾತೆ ಆಪ್ತ ಸೇವಕ ಹಾಗೂ ಟ್ರಸ್ಟ್ ಕಾರ್ಯದರ್ಶಿಯಾಗಿರುವ ಶಿವಯ್ಯಸ್ವಾಮಿ ವಿರುದ್ಧ ಈ ಆರೋಪ ಮಾಡಲಾಗಿದೆ.
ಮಾತಾ ಮಾಣಿಕೇಶ್ವರಿ ಟ್ರಸ್ಟ್ ಹೆಸರಿನಲ್ಲಿ 245 ಎಕರೆ ಜಮೀನಿದೆ. ಇದನ್ನ ಕಬಳಿಸಲು ಶಿವಯ್ಯಸ್ವಾಮಿ, ಅಮ್ಮನವರ ಮಗನೆಂದು ಸುಳ್ಳು ದಾಖಲೆ ಸೃಷ್ಟಿಸಿಕೊಳ್ಳಲಾಗಿದೆ ಎಂದು ಶ್ರೀಹರಿ ಎಂಬುವರು ಆರೋಪಿಸಿದ್ದಾರೆ. ಅಮ್ಮನವರ ದರ್ಶನಕ್ಕೆ ನಮ್ಗೆ ಸರಿಯಾಗಿ ವ್ಯವಸ್ಥೆ ಕಲ್ಪಿಸಿಲ್ಲವೆಂದು ಹೇಳಿರುವ ಕುಟುಂಬಸ್ಥರು, ಇದೀಗ ಗಂಭೀರ ಆರೋಪ ಮಾಡಿದ್ದಾರೆ.