ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಬಯಲಿಗೆ ಬರುತ್ತಿರುವ ಭ್ರಷ್ಟಾಚಾರ ಪ್ರಕರಣಗಳು, ಅದರಲ್ಲಿ ಪ್ರಮುಖವಾಗಿ ಐಎಎಸ್, ಐಪಿಎಸ್ ಅಧಿಕಾರಿಗಳು ಶಾಮೀಲಾಗಿರುವುದು ಸೇರಿದಂತೆ ಎಸಿಬಿ ಸಂಸ್ಥೆಯೇ ಭ್ರಷ್ಟಾಚಾರದ ಅಡ್ಡ ಆಗಿರುವ ಕುರಿತು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಚಳಿ ಬಿಡಿಸಿರುವ ವಿಡಿಯೋ ವೈರಲ್ ಆಗಿದೆ.
ಐಎಎಸ್, ಐಪಿಎಸ್ ಭ್ರಷ್ಟ ಅಧಿಕಾರಿಗಳು, ಎಸಿಬಿಯಲ್ಲಿನ ಭ್ರಷ್ಟಾಚಾರ, ಸರ್ಕಾರದ ನಡೆಯ ವಿರುದ್ಧ ಕಿಡಿ ಕಾರಿದ್ದಾರೆ. ಭ್ರಷ್ಟಾಚಾರ 4ನೇ ಹಂತಕ್ಕೆ ಹೋಗುವ ಮೊದಲು ಇದನ್ನು ಮಟ್ಟ ಹಾಕಬೇಕು ಎಂದಿದ್ದಾರೆ. ನನಗೆ ವರ್ಗಾವಣೆ ಬೆದರಿಕೆಗಳು ಬರುತ್ತಿವೆ. ನಾನು ಯಾವುದಕ್ಕೂ ಹೆದರುವುದಿಲ್ಲ. ನ್ಯಾಯಮೂರ್ತಿ ಆದಮೇಲೆ ನನ್ನ ತಂದೆಯ 4 ಎಕರೆ ಜಮೀನು ಮಾರಿದ್ದಾನೆ ಎಂದಿದ್ದಾರೆ.
ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಅವರ ಖಡಕ್ ಮಾತು ವೈರಲ್ ಆಗಿದೆ. ಎಲ್ಲೆಡೆಯಿಂದ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅದೇ ರೀತಿ ಕಾಂಗ್ರೆಸ್ ಸಂಸದ ಟ್ವೀಟ್ ಮಾಡಿದ್ದು, ಕರ್ನಾಟಕದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವನ್ನು ಬಯಲಿಗೆ ಎಳೆದಿದ್ದಕ್ಕೆ ಬೆದರಿಕೆ ನೀಡಲಾಗುತ್ತಿದೆ. ಸಂಸ್ಥೆಯಿಂದಲೇ ಸಂಸ್ಥೆಯ ಮೇಲೆ ಬುಲ್ಡೋಜರ್ ಹತ್ತಿಸಲಾಗುತ್ತಿದೆ. ಯಾವುದೇ ಹೆದರಿಕೆ ಇಲ್ಲದೆ ಅವರ ಕರ್ತವ್ಯ ನಿರ್ವಹಿಸುತ್ತಿರುವವರ ಪರ ನಾವು ನಿಲ್ಲಬೇಕಿದೆ ಎಂದಿದ್ದಾರೆ.