ಮೈಸೂರು ಕೇಸಿನಲ್ಲಿ ಐವರ ಬಂಧನ, ಓರ್ವ ಬಾಲಾಪರಾಧಿ: ಡಿಜಿ ಐಜಿಪಿ ಸೂದ್

251

ಪ್ರಜಾಸ್ತ್ರ ಸುದ್ದಿ

ಮೈಸೂರು: ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಐವರನ್ನ ಬಂಧಿಸಲಾಗಿದೆ. ಇದರಲ್ಲಿ ಓರ್ವ ಬಾಲಾಪರಾಧಿ ಇದ್ದಾನೆ. ಆತ 17 ವರ್ಷದವನಾಗಿದ್ದು, ಅದನ್ನ ಖಚಿತ ಮಾಡಿಕೊಳ್ಳಬೇಕಿದೆ ಎಂದು, ಡಿಜಿ ಐಜಿಪಿ ಪ್ರವೀಣ್ ಸೂದ್ ಅವರು ಹೇಳಿದ್ದಾರೆ.

ಈ ಬಗ್ಗೆ ಮೈಸೂರು ಎಸ್ಪಿ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತ್ನಾಡಿದ ಅವರು, ಈ ಘಟನೆಯಲ್ಲಿ 6 ಜನ ಆರೋಪಿಗಳಿದ್ದಾರೆ. ಐವರನ್ನ ಬಂಧಿಸಲಾಗಿದೆ. ಓರ್ವ ತಪ್ಪಿಸಿಕೊಂಡಿದ್ದಾನೆ. ಇವರು ಮೊದ್ಲು 3 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಅದು ಯಶಸ್ವಿಯಾಗದೆ ಹೋದಾಗ, ಈ ಕೃತ್ಯವೆಸಗಿದ್ದಾರೆ. ಇನ್ನು ಹೈಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುವ ಹಿನ್ನೆಲೆಯಲ್ಲಿ ಸಂಪೂರ್ಣ ಮಾಹಿತಿ ಕೊಡಲು ಬರುವುದಿಲ್ಲವೆಂದರು.

20 ಗಂಟೆಯಲ್ಲಿ ಎರಡು ಬಾರಿ ಮಾಧ್ಯಮಗೋಷ್ಠಿ ನಡೆಸಿರೋದು ನನ್ನ ಸೇವೆಯಲ್ಲಿ ಇದೇ ಮೊದಲು. ಸಂತ್ರಸ್ತೆ ಕಡೆಯಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ. ಅವರ ಸ್ನೇಹಿತನಿಂದ ಮಾಹಿತಿ ಸಿಕ್ಕಿದೆ. ಆದ್ರೆ, ಅದು ಸಹ ಪೂರ್ತಿ ಆಗಿರ್ಲಿಲ್ಲ. ಆದ್ರೆ, ನಮ್ಮ ಟೀಂ ಐವರನ್ನ ಬಂಧಿಸಿದ್ದಾರೆ. ಇದರಲ್ಲಿ ಒಬ್ಬ 8ನೇ ತರಗತಿ, ಒಬ್ಬ 7ನೇ ತರಗತಿ, ಒಬ್ಬ ಏನೂ ಓದಿಲ್ಲ. ಹೀಗೆ ಇವರೆಲ್ಲ ಮಧ್ಯಮ ವರ್ಗದವರಾಗಿದ್ದಾರೆ. ವೈರಿಂಗ್ ಕೆಲಸ ಮಾಡುವವರು, ಕಾರ್ಪೆಂಟರ್ ಕೆಲಸ ಮಾಡುವರು, ಡ್ರೈವರ್ಸ್ ಕೆಲಸ ಮಾಡುವವರಿದ್ದಾರೆ. ಇದೆಲ್ಲ ಪ್ರಾಥಮಿಕ ಮಾಹಿತಿಯಾಗಿದೆ. ಕೋರ್ಟ್ ಗೆ ಹೇಳಬೇಕಿರುವ ಮಾಹಿತಿ ನೀಡಲು ಬರುವುದಿಲ್ಲ. ಟೆಕ್ನಿಕಲ್, ಸೈಂಟಿಫಿಕ್ ಸಾಕ್ಷಿ ಇನ್ನು ಇದೆ. ಹೀಗಾಗಿ ಆದಷ್ಟು ಬೇಗ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ಕೆಲಸವಾಗುತ್ತೆ ಎಂದು ಡಿಜಿ ಐಜಿಪಿ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!