ವಿಜಯಪುರ: ತೋಟದ ಮನೆಯಲ್ಲಿ ನಾಗರಹಾವುಗಳು ಸರಸ ಸಲ್ಲಾಪದಲ್ಲಿ ತೊಡಗಿದ ದೃಶ್ಯ ಜನರನ್ನ ಸೆಳೆಯುತ್ತಿದೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮಾದ ತೋಟದ ಮನೆಯೊಂದರಲ್ಲಿ ಈ ದೃಶ್ಯ ಕಂಡು ಬಂದಿದೆ.
ಶರಣಯ್ಯ ಹಿರೇಮಠ ಎಂಬುವರ ತೋಟದ ಮನಯಲ್ಲಿ ನಾಗರಹಾವುಗಳು ಸುಮಾರು 3 ಗಂಟೆಗಳವರೆಗೂ ಸರಸ ಸಲ್ಲಾಪದಲ್ಲಿ ತೊಡಗಿಕೊಂಡಿದ್ವು. ಈ ದೃಶ್ಯ ಇದೀಗ ಜಿಲ್ಲೆಯ ಜನರನ್ನ ಕುತೂಹಲದಿಂದ ನೋಡುವಂತೆ ಮಾಡಿದೆ.