ಪಂಚಮಿಗೆ ಬಂದು ಹೋದ ಬಸವಣ್ಣ

444

ಪ್ರಜಾಸ್ತ್ರ ಸುದ್ದಿ

ಜಮಖಂಡಿ: ನಾಗರಪಂಚಮಿ ನಿಮಿತ್ಯ ಕುಂಬಾರರ ಮನೆಯಲ್ಲಿ ಮಾಡಿದ ಮಣ್ಣಿನ ಬಸವಣ್ಣನ ಮೂರ್ತಿಯನ್ನ ಕಲ್ಯಾಣಕಟ್ಟಿ ಮಾರ್ಗವಾಗಿ ಮೆರವಣಿಗೆ ಮಾಡಿ ಶನಿವಾರ ಪ್ರತಿಷ್ಠಾಪನೆ ಮಾಡಲಾಗಿತ್ತು. ಬಳಿಕ ಭಾನುವಾರ ಶಿರಾಹಾಳಶೆಟ್ಟಿ (ಶಿರುಳುಬಾ) ತಂದು ಪೂಜೆ ನೆರವೇರಿಸಿದರು.

ನಾಗರಪಂಚಮಿ ಹಬ್ಬದ ಪ್ರಯುಕ್ತ ಮಣ್ಣಿನ ಬಸವಣ್ಣನಿಗೆ ಹಾಗೂ ಶಿರುಳುಬಾ ಇಬ್ಬರಿಗೂ ಮುತ್ತೈದೆಯರಿಂದ ಪೂಜೆ ಸಲ್ಲಿಸಿ ಹೊಳೆಗೆ ಕಳುಹಿಸಲಾಯಿತು. ಈ ಸಂದರ್ಭದಲ್ಲಿ ಡೊಳ್ಳಿನ ವಾಲಗ, ಸನಾದಿಯವರ ತಾಳ ಮದ್ದಳೆ ಜೋರಾಗಿತ್ತು.

ಕರೋನಾ ವೈರಸ್ ಹರಡದಂತೆ ಸರ್ಕಾರ ಜಾರಿಗೊಳಿಸಿರುವ ಭಾನುವಾರ ಲಾಕ್ ಡೌನ್ ನಿಂದಾಗಿ ಅಂಗಡಿ ಮುಗ್ಗಟ್ಟು, ಖಾಸಗಿ ಸಾರಿಗೆ, ಆಟೋ ಎಲ್ಲವೂ ಸ್ತಬ್ಧವಾಗಿತ್ತು. ಹೀಗಾಗಿ ಯಾವುದೇ ಗದ್ದಲ, ಗಲಾಟೆ ಅಲ್ಲದೆ ಬಸವಣ್ಣನ ಮೂರ್ತಿಗೆ ಹೊಳೆಗೆ ಕಳುಹಿಸಲಾಯ್ತು.




Leave a Reply

Your email address will not be published. Required fields are marked *

error: Content is protected !!