ಬಸ್ ಹಿಂಬದಿ ಚಕ್ರದಡಿ ಸಿಲುಕಿ ವೃದ್ಧೆ ಸಾವು

271

ಪ್ರಜಾಸ್ತ್ರ ಸುದ್ದಿ

ಜಮಖಂಡಿ: ಜಮಖಂಡಿ ಘಟಕದ ಬಸ್ ಹಿಂಬದಿಯ ಚಕ್ರಕ್ಕೆ ವೃದ್ಧೆಯೊಬ್ಬಳು ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ. ತಾಲೂಕಿನ ಗದ್ಯಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಈ ಘಟನೆ ನಡೆದಿದೆ.

76 ವರ್ಷದ ಶಾಂತವ್ವ ಬಸಪ್ಪ ನಾಗೇಶ್ವರ ಸಾವನ್ನಪ್ಪಿದ ವೃದ್ಧೆಯಾಗಿದ್ದಾಳೆ. ಬಸ್ ಹೊರಟಿರುವಾಗ ಆಯತಪ್ಪಿ ಹಿಂಬದಿಯ ಚಕ್ರದಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಮಗ ಅಣ್ಣಪ್ಪ ಬಸಪ್ಪ ನಾಗೇಶ್ವರ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!