ಅಭಿನಂದನ್ ಬಿಡುಗಡೆ ಮಾಡಿದ್ದ ಪಾಕ್ ಗೆ ಅಂದು ನಡುಕ ಹುಟ್ಟಿದ್ಯಾಕೆ?

282

ಪ್ರಜಾಸ್ತ್ರ ಸುದ್ದಿ

ನವದೆಹಲಿ: ವಾಯು ಪಡೆಯ ಯುದ್ಧ ವಿಮಾನ ಪಾಕ್ ಗಡಿರೇಖೆಯಲ್ಲಿ ಪತನಗೊಂಡ ಪರಿಣಾಮ ಪಾಕ್ ಸೈನಿಕರ ಕೈಯಲ್ಲಿ ಸಿಲುಕಿದ್ದ ಪೈಲೆಟ್ ಅಭಿನಂದನ್ ಅವರನ್ನ ಕಳೆದ ಫೆಬ್ರವರಿಯಲ್ಲಿ ಬಂಧಿಸಿತ್ತು. ಬಳಿಕ ಇಮ್ರಾನ್ ಸರ್ಕಾರ ಅವರನ್ನ ಬಿಡುಗಡೆ ಮಾಡಿತ್ತು.

ಈ ವಿಚಾರ ಇಡೀ ದೇಶ್ಯಾದ್ಯಂತ ಭಾರಿ ಸದ್ದು ಮಾಡಿತ್ತು. ಇದೀಗ ಮತ್ತೊಂದು ಸತ್ಯ ಹೊರ ಬಿದ್ದಿದೆ. ಅಭಿನಂದನ್ ಅವರನ್ನ ಬಿಡುಗಡೆ ಮಾಡದೆ ಹೋದ್ರೆ, ಭಾರತದ ದಾಳಿ ನಮ್ಮ ಖಚಿತ ಅನ್ನೋ ಭಯ ಪಾಕ್ ನಾಯಕರಲ್ಲಿ ನಡುಕ ಹುಟ್ಟಿಸುವಂತೆ ಮಾಡಿತಂತೆ. ಪಿಎಂಎಲ್ಎನ್ ಲೀಡರ್ ಅಝಾಝ್ ಸಾದಿಕ್, ಸಂಸತ್ ನಲ್ಲಿ ಮಾತ್ನಾಡಿ ಇಮ್ರಾನ್ ಖಾನ್ ಸರ್ಕಾರವನ್ನ ತೀವ್ರ ತರಾಟೆ ತೆಗೆದುಕೊಂಡಿದ್ರಂತೆ. ಅಭಿನಂದನ್ ಬಿಡುಗಡೆಯಾಗದೆ ಹೋದ್ರೆ, ಭಾರತದ ದಾಳಿ ಖಚಿತವೆಂದು ಹೇಳಿದ್ರಂತೆ.

ಆ ದಿನ ಸ್ಪಷ್ಟವಾಗಿ ನೆನಪಿದೆ. ವಿದೇಶಾಂಗ ಸಚಿವ ಮೊಹಮ್ಮದ ಖುರೇಶಿ, ಸೇನಾ ಮುಖ್ಯಸ್ಥ ಜನರಲ್ ಕ್ವಾಮರ್ ಜಾವೇದ್ ಬಜ್ವಾ ಸಭೆಯಲ್ಲಿದ್ರು. ಪ್ರಧಾನಿ ಇಮ್ರಾನ್ ಖಾನ್, ಸಭೆಗೆ ಬರಲು ನಿರಾಕರಿಸಿದ್ರು. ಅಭಿನಂದನ್ ಬಿಡುಗಡೆ ಮಾಡದೆ ಹೋದ್ರೆ ರಾತ್ರಿ 9 ಗಂಟೆಗೆ ನಮ್ಮ ಮೇಲೆ ಭಾರತ ಖಂಡಿತ ದಾಳಿ ಮಾಡುತ್ತೆ ಅನ್ನೋ ಭಯ ಎಲ್ಲರಲ್ಲಿತ್ತು ಎಂದು ಹೇಳಿದ್ದಾರೆ. ಈ ಮೂಲಕ ಅಭಿನಂದನ್ ಬಿಡುಗಡೆ ಹಿಂದಿನ ರಹಸ್ಯವನ್ನ ಪಿಎಂಎಲ್ಎನ್ ಲೀಡರ್ ಅಝಾಝ್ ಸಾದಿಕ್ ಬಿಚ್ಚಿಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!