ಪ್ರಜಾಸ್ತ್ರ ಅಪರಾಧ ಸುದ್ದಿ
ಬಾಗಲಕೋಟೆ: ಒಂದೇ ಕುಟುಂಬದ ನಾಲ್ವರನ್ನ ಕೊಲೆ ಮಾಡಿರುವ ಭೀಕರ ಘಟನೆ ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮದಲ್ಲಿ ನಡೆದಿದೆ. ಆಸ್ತಿ ಕಲಹದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ.
ಮಲ್ಲಪ್ಪ, ಹನುಮಂತ, ಬಸವರಾಜ ಹಾಗೂ ಈಶ್ವರ ಕೊಲೆಯಾದ ದುರ್ದೈವಿಗಳು. ಮುದರಡ್ಡಿ ಹಾಗೂ ಪುಟಾಣಿ ಕುಟುಂಬಗಳ ನಡುವೆ ಆಸ್ತಿ ವಿವಾದ ಹಲವು ವರ್ಷಗಳಿಂದ ಇತ್ತು. ಆಗಾಗ ಜಗಳ ಸಹ ನಡೆದಿದೆ. ಶನಿವಾರ ರಾತ್ರಿ ಪುಟಾಣಿ ಕುಟುಂಬದವರು ಮಾರಕಾಸ್ತ್ರಗಳಿಂದ, ಕಲ್ಲಿನಿಂದ ನಾಲ್ವರನ್ನ ಕೊಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಜಮಖಂಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.