ಪ್ರಜಾಸ್ತ್ರ ಅಪರಾಧ ಸುದ್ದಿ
ಬಾಗಲಕೋಟೆ: ಆಸ್ತಿ ವಿವಾದ ಸಂಬಂಧ ಒಂದೇ ಕುಟುಂಬದ ನಾಲ್ವರನ್ನ ಕೊಂದ ಘಟನೆ ಶನಿವಾರ ರಾತ್ರಿ ನಡೆದಿದ್ದು, ಈ ಸಂಬಂಧ 9 ಜನರನ್ನ ಬಂಧಿಸಲಾಗಿದೆ. ಮುದರಡ್ಡಿ ಹಾಗೂ ಪುಟಾಣಿ ಕುಟುಂಬಗಳ ನಡುವೆ ಆಸ್ತಿ ವಿವಾದ ಇತ್ತು. ಹೀಗಿರುವಾಗ ಶನಿವಾರ ರಾತ್ರಿ ಪುಟಾಣಿ ಕುಟುಂಬಸ್ಥರು ನಾಲ್ವರನ್ನ ಹತ್ಯೆ ಮಾಡಿರುವ ಆರೋಪವಿದೆ.
ಇದೀಗ ಜಮಖಂಡಿ ಠಾಣೆ ಪೊಲೀಸರು ಪುಟಾಣಿ ಕುಟುಂಬದ 9 ಜನರನ್ನ ಬಂಧಿಸಿದ್ದಾರೆ. ಒಟ್ಟು ಇದರಲ್ಲಿ 12 ಜನರು ಶಾಮೀಲಾಗಿದ್ದಾರೆ ಎನ್ನಲಾಗ್ತಿದೆ. ನಾಗಪ್ಪ, ಪರಪ್ಪ, ಶಂಕರ, ನಂದೀಶ, ಈಶ್ವರ, ಚನ್ನಬಸಪ್ಪ, ರುಕ್ಮವ್ವ, ಅಂಬವ್ವ, ಪ್ರೇಮಾ, ಮಾಲಾಶ್ರೀ, ಸುನಂದಾ ಸೇರಿದಂತೆ 12 ಜನರ ವಿರುದ್ಧ ಆರೋಪ ಕೇಳಿ ಬಂದಿದೆ.