ಪೊಲೀಸ್ ಕೆಲಸ ಬಿಟ್ಟು ಬಂದ ನಾಯ್ಕ, ಕಾರಜೋಳಗೆ ಹಿನ್ನೆಡೆ!

172

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ತನ್ನ ಸ್ಪರ್ಧಿಗಳನ್ನು ಘೋಷಿಸಿದೆ. ಬಹುತೇಕ ಕ್ಷೇತ್ರಗಳಲ್ಲಿ ಹಾಲಿ ಹಾಗೂ ಮಾಜಿ ಶಾಸಕರಿಗೆ ಮಣೆ ಹಾಕಿದೆ. ನಾಗಠಾಣ ಎಸ್ಸಿ ಮೀಸಲು ಕ್ಷೇತ್ರಕ್ಕೆ ಇಂಡಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಸಂಜೀವ ಐಹೊಳೆ ಅವರಿಗೆ ಟಿಕೆಟ್ ಘೋಷಿಸಿದೆ. ಈ ಮೂಲಕ ಹೊಸಬರಿಗೆ ಅವಕಾಶ ನೀಡಿದೆ.

ಈ ಕ್ಷೇತ್ರದಿಂದ ತುಂಬಾ ಕೇಳಿ ಬಂದ ಹೆಸರು ಸಚಿವ ಗೋವಿಂದ ಕಾರಜೋಳ ಅವರ ಪುತ್ರ ಉಮೇಶ, ಸಿಪಿಐ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಂದ ಮಹೇಂದ್ರಕುಮಾರ ನಾಯ್ಕ ಹಾಗೂ ಕೊನೆಯ ಕ್ಷಣದಲ್ಲಿ ಸಂಸದ ರಮೇಶ ಜಿಗಜಿಣಗಿ ಅವರದ್ದು. ಆದರೆ, ಇವರೆಲ್ಲರಿಗೂ ಹಿನ್ನಡೆಯಾಗಿದೆ.

ಹೇಗಾದರೂ ಮಾಡಿ ಮಗನಿಗೆ ಟಿಕೆಟ್ ಕೊಡಿಸಬೇಕು ಅನ್ನೋ ಪ್ರಯತ್ನಿಸಿದ ಸಚಿವ ಗೋವಿಂದ ಕಾರಜೋಳ, ಕೇಂದ್ರ ರಾಜಕಾರಣದಿಂದ ರಾಜ್ಯ ರಾಜಕೀಯಕ್ಕೆ ಮರಳಬೇಕು ಎಂದುಕೊಂಡಿದ್ದು ಸಂಸದ ಜಿಗಜಿಣಗಿ, ಸಿಪಿಐ ಕೆಲಸ ಬಿಟ್ಟು ಬಂದು ರಾಜಕೀಯದಲ್ಲಿ ಏನಾದರೂ ಮಾಡಬೇಕು ಎಂದುಕೊಂಡಿದ್ದ ಮಹೇಂದ್ರಕುಮಾರ ನಾಯ್ಕ ಅವರ ಲೆಕ್ಕಾಚಾರ ಉಲ್ಟಾ ಮಾಡಲಾಗಿದೆ. ಇದರದೊಂದಿಗೆ ಜಿಲ್ಲೆಯಲ್ಲಿ ತಮ್ಮ ಹಿಡಿತ ಸಾಧಿಸಬೇಕು ಎಂದುಕೊಂಡಿದ್ದ ಕಾರಜೋಳ, ಜಿಗಜಿಣಗಿ ಅವರಿಗೆ ಬಿಜೆಪಿ ಹೈಕಮಾಂಡ್ ಬ್ರೇಕ್ ಹಾಕಿದೆ.




Leave a Reply

Your email address will not be published. Required fields are marked *

error: Content is protected !!