ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಈಗಾಗ್ಲೇ ಬಿಜೆಪಿ 3ನೇ ಪಟ್ಟಿ ಬಿಡುಗಡೆ ಮಾಡಿದ್ದು ಈ ಮೂಲಕ 222 ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಲಾಗಿದೆ. ಉಳಿದಿರುವುದು 2 ಕ್ಷೇತ್ರ. ಒಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿನಿಧಿಸುತ್ತಿದ್ದ ಶಿವಮೊಗ್ಗ. ಇನ್ನೊಂದು ರಾಯಚೂರು ಜಿಲ್ಲೆಯ ಮಾನ್ವಿ. ಈ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲ್ಲ.
ಶಿವಮೊಗ್ಗದಿಂದ ಮಗ ಕಾಂತೇಶನನ್ನು ಕಣಕ್ಕೆ ಇಳಿಸಲು ಕೆ.ಎಸ್ ಈಶ್ವರಪ್ಪ ಪ್ರಯತ್ನ ನಡೆಸಿದ್ದಾರೆ. ಆದರೆ, ಅದು ಇನ್ನು ಸಾಧ್ಯವಾಗಿಲ್ಲ. ಮಾನ್ವಿಯಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಅನ್ನೋದು ಬಿಜೆಪಿ ಹೈಕಮಾಂಡ್ ಪ್ಲಾನ್. ಹೀಗಾಗಿ ಸಿಎಂ ಬೊಮ್ಮಾಯಿ ಪರ ಪ್ರಚಾರಕ್ಕೆ ಸಿದ್ಧವಾಗಿರುವ ನಟ ಸುದೀಪಗೆ ಈ ಎರಡು ಕ್ಷೇತ್ರಗಳ ಆಫರ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಶಿವಮೊಗ್ಗ ಅಥವ ಮಾನ್ವಿ ಕ್ಷೇತ್ರಗಳಲ್ಲಿ ಸುದೀಪ್ ಆಯ್ಕೆ ಮಾಡಿಕೊಂಡ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದಕ್ಕೆ ನಟ ಸುದೀಪ್ ಒಪ್ಪಿಲ್ಲವಂತೆ. ಆದರೆ, ಕೊನೆ ಕ್ಷಣದ ತನಕ ಏನಾಗುತ್ತೆ ಎಂದು ಹೇಳಲಾಗದು. ಈ ಕಾರಣಕ್ಕೆ ಶಿವಮೊಗ್ಗ, ಮಾನ್ವಿ ಕುತೂಹಲ ಮೂಡಿಸಿದೆ.