ಬೆಂಗಳೂರು: ಮಂಗಳವಾರ ಬೆಳಗ್ಗೆ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ 17 ಜನ ಸಚಿವರಿಗೆ ಇಂದು ಸಂಜೆ ಖಾತೆ ಹಂಚಿಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗ್ತಿದೆ.
ಸಿಎಂ ಬಿ.ಎಸ್ ಯಡಿಯೂರಪ್ಪನವರು ಖಾತೆ ಹಂಚಿಕೆ ಲಿಸ್ಟ್ ರೆಡಿ ಮಾಡಿಕೊಂಡಿದ್ದು ಯಾರಿಗೆ ಯಾವ ಖಾತೆ ಅನ್ನೋದು ಸಂಜೆಯೊಳಗೆ ತಿಳಿಯಲಿದೆ ಅನ್ನೋದು ರಾಜಕೀಯ ಪಡಸಾಲೆಯ ಮಾತು. ಗೃಹ ಖಾತೆಗೆ ಮಾಜಿ ಸಿಎಂ ಜಗದೀಶ ಶೆಟ್ಟರ, ಮಾಜಿ ಡಿಸಿಎಂ ಆರ್.ಅಶೋಕ ಅವರು ರೇಸಿನಲ್ಲಿದ್ದಾರೆ.
ಗ್ರಾಮೀಣಾಭಿವೃದ್ಧಿ ಮೇಲೆ ಮಾಧುಸ್ವಾಮಿ ಕಣ್ಣಿಟ್ಟಿದ್ದು, ಲೋಕೋಪಯೋಗಿ ಮತ್ತು ಜಲಸಂಪನ್ಮೂಲ, ಇಂಧನ ಖಾತೆಗಾಗಿ ಪೈಪೋಟಿ ನಡೆದಿದೆ. ಬಹುಶಃ ಇಂದು ಸಂಜೆಯೊಳಗೆ ಖಾತೆ ಹಂಚಿಕೆಯಾಗಬಹುದು.