ಸ್ಪಾಟ್ ಫಿಕ್ಸಿಂಗ್ ಸಂಬ್ಬಂಧ ಆಜೀವ ನಿಷೇಧಕ್ಕೆ ಒಳಗಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಶ್ರೀಶಾಂತಗೆ ಬಿಸಿಸಿಐ ಗುಡ್ ನ್ಯೂಸ್ ನೀಡಿದೆ. ಆಜೀವ ನಿಷೇಧದಿಂದ ಶಿಕ್ಷೆಯನ್ನ 7 ವರ್ಷಕ್ಕೆ ಇಳಿಕೆ ಮಾಡಿದೆ. ಬಿಸಿಸಿಐ ನೀಡಿದ್ದ ಆಜೀವ ನಿಷೇಧ ಪ್ರಶ್ನಿಸಿ ಕೋರ್ಟ್ ಮೆಟ್ಟಿಲು ಏರಿದ್ರು. ಸಾಕ್ಷಾಧಾರ ಕೊರತೆಯಿಂದ ಕೋರ್ಟ್ ಕ್ಲೀನ್ ಚಿಟ್ ನೀಡಿದ್ರೂ ಬಿಸಿಸಿಐ ಗ್ರೀನ್ ಸಿಗ್ನಲ್ ಕೊಟ್ಟಿರ್ಲಿಲ್ಲ.
ಬಿಸಿಸಿಐ ಒಂಬುಡ್ಸ್ ಮನ್ ಡಿ.ಕೆ ಜೈನ್ ಶ್ರೀಶಾಂತ ಮೇಲಿಂದ ಆಜೀವ ನಿಷೇಧ ತೆರವುಗೊಳಿಸಿ ಶಿಕ್ಷೆಯನ್ನ 7 ವರ್ಷಕ್ಕೆ ಇಳಿಸಿದ್ದಾರೆ. ಹೀಗಾಗಿ ಮುಂದಿನ ಆಗಸ್ಟ್ 7ಕ್ಕೆ ಅವರ ಶಿಕ್ಷೆ ಮುಗಿಯಲಿದ್ದು ಮತ್ತೆ ಕ್ರಿಕೆಟ್ ಆಡಬಹುದಾಗಿದೆ. 2013ರಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಸಂಬಂಧ ಆಜೀವ ನಿಷೇಧ ಹೇರಲಾಗಿತ್ತು.
ಕ್ರಿಕೆಟ್ ಜೀವನಕ್ಕೆ ಕಾರ್ಮೋಡ ಕವಿದ ಪರಿಣಾಮ ವೇಗದ ಬೌಲರ್ ಶ್ರೀಶಾಂತ ರಿಯಾಲಿಟಿ ಶೋ, ಡ್ಯಾನ್ಸ್ ಶೋ, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ. ಕನ್ನಡದ ಕೆಂಪೇಗೌಡ-2 ಸಿನ್ಮಾದಲ್ಲಿ ಸಹ ಶ್ರೀಶಾಂತ ನಟಿಸಿದ್ದಾನೆ.