ನವದೆಹಲಿ: 2012ರಲ್ಲಿ ಇಡೀ ದೇಶವನ್ನ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಡೆತ್ ವಾರೆಂಟ್ ಫಿಕ್ಸ್ ಆಗಿದೆ. ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿ ಕೋರ್ಟ್ ಇಂದು ಆದೇಶ ನೀಡಿದೆ. ಜನವರಿ 22ರ ಬೆಳಗ್ಗೆ 7ಗಂಟೆಗೆ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಲಾಗಿದೆ.
ಮರಣದಂಡನೆಗೆ ಒಳಗಾದವರನ್ನ ಮರಣದಂಡನೆ ಜಾರಿಗೊಳಿಸುವ ಆದೇಶವನ್ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸತೀಶಕುಮಾರ ಅರೋರ್ ಆದೇಶ ನೀಡಿದ್ದಾರೆ. ಅಪರಾಧಿಗಳ ಕುರಿತು ಕೋರ್ಟ್ ಹಾಗೂ ರಾಷ್ಟ್ರಪತಿ ಮುಂದೆ ಯಾವುದೇ ಅರ್ಜಿಗಳು ಉಳಿದಿಲ್ಲ. ಅಲ್ದೇ, ಅಪರಾಧಿಗಳ ಮರು ಪರಿಶೀಲನಾ ಅರ್ಜಿಯನ್ನ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಹೀಗಾಗಿ ಕಾಮಪಿಶಾಚಿಗಳು ನೇಣುಕಂಬವೇರುವುದು ಪಕ್ಕಾ ಆಗಿದೆ.