ಮಾರ್ಚ್ 3ಕ್ಕೆ ನಿರ್ಭಯಾ ಅಪರಾಧಿಗಳಿಗೆ ಗಲ್ಲು

684

ನವದೆಹಲಿ: ನಿರ್ಭಯಾ ಕೇಸಿಗೆ ಸಂಬಂಧಿಸಿದ ನಾಲ್ವರು ಅಪರಾಧಿಗಳಿಗೆ ಹೊಸ ಡೆತ್ ವಾರೆಂಟ್ ಜಾರಿ ಮಾಡಲಾಗಿದೆ. ಪಟಿಯಾಲಾ ಕೋರ್ಟ್ ಮಾರ್ಚ್ 3ಕ್ಕೆ ಗಲ್ಲು ಶಿಕ್ಷೆ ನೀಡಿ ಹೊಸ ಡೆತ್ ವಾರೆಂಟ್ ಜಾರಿ ಮಾಡಿದೆ.

ದೆಹಲಿ ಪಟಿಯಾಲಾ ಕೋರ್ಟ್ ಇಂದು ಹೊಸ ಡೆತ್ ವಾರೆಂಟ್ ಹೊರಡಿಸಿದ್ದು, ಮಾರ್ಚ್ 3ರ ಬೆಳಗ್ಗೆ 6 ಗಂಟೆಗೆ ಗಲ್ಲು ಶಿಕ್ಷೆ ವಿಧಿಸಲು ಸೂಚಿಸಿದೆ. ಈ ಕೇಸಿನ ಅಪರಾಧಿಗಳು ಸಾವಿನ ದವಡೆಯಿಂದ ತಪ್ಪಿಸಿಕೊಳ್ಳಲು ಎಲ್ಲ ರೀತಿಯ ತಂತ್ರಗಳನ್ನ ಬಳಿಸಿಕೊಂಡಿದ್ರು. ಇದೀಗ ಅದೆಲ್ಲವೂ ಕ್ಲೋಸ್ ಆಗಿದೆ. ಹೀಗಾಗಿ ಇದೀಗ ಅಪರಾಧಿ ವಿನಯ ಶರ್ಮಾ ಹೊಸ ನಾಟಕ ಶುರು ಮಾಡಿದ್ದು, ಜೈಲಿನಲ್ಲಿ ಮುಷ್ಕರ ನಡೆಸಿದ್ದಾನಂತೆ.

ಅಪರಾಧಿಗಳ ವಿಳಂಬ ನೀತಿಯಿಂದ ನಿರ್ಭಯಾ ತಾಯಿ ಕೋರ್ಟ್ ಅಂಗಳದಲ್ಲಿಯೇ ಕಣ್ಣೀರು ಹಾಕಿ ವ್ಯವಸ್ಥೆ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ಇದೀಗ ಮಾರ್ಚ್ 3ಕ್ಕೆ ಹೇಳಲಾಗಿದೆ. ಇದಾದ್ರೂ ಶಿಕ್ಷೆಯಾಗುತ್ತಾ ಮತ್ತೆ ಹೊಸ ನಾಟಕ ಶುರುವಾಗುತ್ತಾ ಅನ್ನೋ ಪ್ರಶ್ನೆ ಜನರಲ್ಲಿ ಮೂಡಿದೆ.




Leave a Reply

Your email address will not be published. Required fields are marked *

error: Content is protected !!