ನಾಡಿನ ಹಲವೆಡೆ ವರ್ಷಧಾರೆ…

391

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ. ಈ ಬಗ್ಗೆ ಹವಾಮಾನ ಇಲಾಖೆ ಮೊದ್ಲೇ ಮುನ್ಸೂಚನೆ ನೀಡಿತ್ತು. ಇಂದಿನಿಂದ ಪೂರ್ವ ಮುಂಗಾರು ಎಂಟ್ರಿಯಾಗುತ್ತೆ ಎಂದು. ಅದು ನಿಜವಾಗಿದ್ದು, ರಾಜ್ಯದ ಹಲವು ಕಡೆ ಮಳೆ ಸುರಿಯುತ್ತಿದೆ.

ಕಲಕೇರಿಯಲ್ಲಿ ಸುರಿದ ಮಳೆ

ಚಿತ್ರದುರ್ಗ, ಉಡುಪಿ, ಕಲಬುರಗಿ, ವಿಜಯಪುರ ಭಾಗದಲ್ಲಿ ಮಳೆ ಸುರಿಯುತ್ತಿದೆ. ಕೆಲವು ಭಾಗದಲ್ಲಿ ಮಧ್ಯಾಹ್ನದಿಂದಲೇ ಮಳೆ ಶುರುವಾಗಿದೆ. ಇನ್ನು ಕೆಲವು ಕಡೆ ಸಂಜೆ ಮೇಲೆ ಮಳೆ ಶುರುವಾಗಿದ್ದು, ಬಿಸಿಲಿನಿಂದ ಬಳಲಿ ಬೆಂಡಾದ ಜನಕ್ಕೆ ಒಂದಿಷ್ಟು ತಂಪು ಸುರಿಸಿದ್ದಾನೆ ವರುಣದೇವ.

ಗುಬ್ಬೇವಾಡದಲ್ಲಿ ಕಾಣಿಸಿಕೊಂಡ ವರಣುದೇವ

ಇನ್ನು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗುಬ್ಬೇವಾಡ, ಗೋಲಗೇರೆ, ಕಲಕೇರಿ ಭಾಗದಲ್ಲಿ ಮಳೆಯಾಗಿದೆ. ಇದ್ರಿಂದಾಗಿ ಜನರಲ್ಲಿ ಒಂದಿಷ್ಟು ಸಂತಸ ಮೂಡಿದೆ. ಪೂರ್ವ ಮುಂಗಾರು ಮೇ ಮೊದಲೇ ಶುರುವಾಗಿದ್ದಕ್ಕೆ ಸಂತಸ ವ್ಯಕ್ತಪಡಿಸ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಮುಂದುವರೆಯಲಿದೆ.

ಗೋಲಗೇರಿಯಲ್ಲಿ ಮಳೆಯ ಆರ್ಭಟ
ಉಡುಪಿಯಲ್ಲಿ ಮಧ್ಯಾಹ್ನ ಸುರಿದ ಮಳೆ



Leave a Reply

Your email address will not be published. Required fields are marked *

error: Content is protected !!