ಪಂಚಮಸಾಲಿ ಮೀಸಲಾತಿ, ನಮ್ಮ ಕೈಯಲ್ಲಿಲ್ಲ: ಶಾಸಕ ಯತ್ನಾಳ

205

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಪಂಚಮಸಾಲಿಗಳಿಗೆ ಮೀಸಲಾತಿ ನೀಡಿ, ನೋಟಿಫಿಕೇಷನ್ ಹೊರಡಿಸಲಾಗಿದೆ. ರಾಜ್ಯಪಾಲರ ಸುಗ್ರೀವಾಜ್ಞೆಯೂ ಆಗಿದೆ. ಈಗ ನಮ್ಮ ಕೈಯಲ್ಲಿಲ್ಲ. ಏನಿದ್ದರೂ ಸರ್ಕಾರ ಮಾಡಬೇಕು ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಗಲೆಲ್ಲ ಪ್ರತಿಭಟನೆ ಮಾಡುವುದಕ್ಕ ಅರ್ಥವಿಲ್ಲ. ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ಶಿಷ್ಯರು ಅಧಿಕಾರದಲ್ಲಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್, ವಿನಯ್ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ ಅವರು ಬೇಡಿಕೆ ಇಟ್ಟಿದ್ದರು. ಈಗ ಅವರದೆ ಸರ್ಕಾರವಿದೆ ಕೊಡಿಸಲಿ ಎಂದರು.




Leave a Reply

Your email address will not be published. Required fields are marked *

error: Content is protected !!