ನೇಗಿಲಯೋಗಿಗಳ ಸುದೀರ್ಘ ಹೋರಾಟಕ್ಕೆ ಬಿತ್ತು ತೆರೆ

465

ಪ್ರಜಾಸ್ತ್ರ ಸುದ್ದಿ

ನವದೆಹಲಿ: ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಕಳೆದ ಒಂದು ವರ್ಷಕ್ಕೂ ಅಧಿಕ ಕಾಲ ರೈತರು ಪ್ರತಿಭಟನೆ ನಡೆಸಿ ಅದರಲ್ಲಿ ಯಶಸ್ವಿಯಾದರು. ಇದರ ನೇತೃತ್ವ ವಹಿಸಿಕೊಂಡಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಇಂದು ಹೋರಾಟಕ್ಕೆ ತೆರೆ ಎಳೆದಿದೆ.

ರೈತರ ಉಳಿದ ಬೇಡಿಕೆಗಳನ್ನು ಕಿಸಾನ್ ಮೋರ್ಚಾದ ಐವರು ಸದಸ್ಯರ ಸಮಿತಿಗೆ ಕೇಂದ್ರ ಸರ್ಕಾರ ಕರಡು ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಬುಧವಾರ ರಾತ್ರಿ ಸಮ್ಮಿತಿ ಸೂಚಿಸಲಾಗಿದೆ. ಗುರುವಾರ ಮಧ್ಯಾಹ್ನ ದೆಹಲಿ-ಹರಿಯಾಣ ನಡುವಿನ ಸಿಂಘು ಗಡಿಯಲ್ಲಿ ರಾಕೇಶ್ ಟಿಕಾಯತ್ ಮುಂದಾಳತ್ವದಲ್ಲಿ ಅಂತಿಮ ಸಭೆ ನಡೆಸಿ ಹೋರಾಟಕ್ಕೆ ತೆರೆ ಎಳೆಯಲಾಗಿದೆ.




Leave a Reply

Your email address will not be published. Required fields are marked *

error: Content is protected !!