ಬೆಂಗಳೂರು/ತುಮಕೂರು: ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಆರ್.ಎಲ್ ಜಾಲಪ್ಪ ಅವರ ನಿವಾಸ, ಕಚೇರಿ, ಅವರಿಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ರೇಡ್ ಆಗಿದೆ. ಈ ಮೂಲಕ ಮತ್ತೆ ಕಾಂಗ್ರೆಸ್ ನಾಯಕರಲ್ಲಿ ಟೆನ್ಷನ್ ಶುರುವಾಗಿದೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಮನೆ, ಕಚೇರಿ, ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ಬೆಳಂಬೆಳಗ್ಗೆ ದಾಳಿ ನಡೆಸಿದ್ರು. ತಮಕೂರಿನ ಸಿದ್ಧಾರ್ಥ ಶಿಕ್ಷಣ ಸಂತೆ, ನೆಲಮಂಗಲ ತಾಲೂಕಿನ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಅವರಿಗೆ ಸೇರಿದ ಆಸ್ತಿಗಳ ಮೇಲೆ ದಾಳಿ ನಡೆದಿದೆ. ಸಿದ್ಧಾರ್ಥ ಇಂಜನಿಯರಿಂಗ್ ಕಾಲೇಜಿನ ಮೇಲೆ ಮೂರು ತಂಡಗಳಾಗಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇನ್ನು ಪರಮೇಶ್ವರ ಆಪ್ತ ಬೇಗೂರು ರಂಗನಾಥ ಮನೆ ಮೇಲೆ ದಾಳಿ ನಡೆದಿದೆ. ನೆಲಮಂಗಲ ಭಾಗದ ಕಾಂಗ್ರೆಸ್ ಕಾರ್ಯಕರ್ತನಾಗಿರುವ ರಂಗನಾಥ, ಈ ಭಾಗದ ವ್ಯವಹಾರ ನೋಡಿಕೊಳ್ತಿದ್ದ ಅಂತಾ ಹೇಳಲಾಗ್ತಿದೆ.
ಸಿದ್ಧಾರ್ಥ ಮೆಡಿಕಲ್ ಕಾಲೇಜು ಹಾಗೂ ಆರ್.ಎಲ್ ಜಾಲಪ್ಪ ಮಡಿಕಲ್ ಕಾಲೇಜು ಪ್ರವೇಶಕ್ಕೆ ಮ್ಯಾನೇಜಮೆಂಟ್ ಕೋಟಾದಡಿ ಆದ ಅಡ್ಮಿಷನ್ ಗಳ ಅಪಾರ ಪ್ರಮಾಣದ ಹಣ, ನಗದು ರೂಪದಲ್ಲಿದೆ. ಈ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಅಂತಾ ಹೇಳಲಾಗ್ತಿದೆ.
ಇನ್ನು ಆರ್.ಎಲ್ ಜಾಲಪ್ಪ ಅವರಿಗೆ ಸಂಬಂಧಿಸಿದ ಕೋಲಾರ ಹೊರವಲಯದ ಆರ್.ಎಲ್ ಜಾಲಪ್ಪ ಶಿಕ್ಷಣ ಸಂಸ್ಥೆಗಳು ಹಾಗೂ ಆಸ್ಪತ್ರೆ ಮೇಲೆ 10ಕ್ಕೂ ಐಟಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಇದರ ಜೊತೆ ದೊಡ್ಡಬಳ್ಳಾಪುರದಲ್ಲಿರುವ ಜಾಲಪ್ಪ ಅವರ ಪುತ್ರ ರಾಜೇಂದ್ರ ಮನೆ ಮೇಲೆ ಸಹ ಐಟಿ ದಾಳಿ ನಡೆದಿದೆ.