ಬೆಂಗಳೂರು: ಪಾರ್ಟಿಗೆ ಹೋಗಿದ್ದ ಇಬ್ಬರು ಟೆಕ್ಕಿಗಳ ಪೈಕಿ ಓರ್ವ ಕೆರೆಗೆ ಹಾರಿರುವ ಘಟನೆ ರಾಮಮೂರ್ತಿ ನಗರದ ಕಲ್ಕೆರೆ ಕೆರೆಯಲ್ಲಿ ನಡೆದಿದೆ. ಸಚಿನ ಹಾಗೂ ಉಲ್ಲಾಸ ಅನ್ನೋ ಇಬ್ಬರು ಟೆಕ್ಕಿಗಳು ಪಾರ್ಟಿಗೆ ಹೋದಾಗ ಸಚಿನ ಕಣ್ಮರೆಯಾಗಿದ್ದಾನೆ.
ಪಾರ್ಟಿ ಮಾಡಿದ ಬಳಿಕ ಇಬ್ಬರು ತೆಪ್ಪದಲ್ಲಿ ವಿಹಾರ ಮಾಡಿದ್ದಾರೆ. ನಶೆಯಲ್ಲಿದ್ದ ಕಾರಣಕ್ಕೆ ಸಚಿನ ನೀರಿಗೆ ಬಿದ್ದಿರುವ ಶಂಕೆಯಿದೆ. ಅಲ್ದೇ, ಆತ ಸಾವನ್ನಪ್ಪಿರಬಹುದು ಅನ್ನೋ ಅನುಮಾನ ವ್ಯಕ್ತವಾಗಿದ್ದು ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಸಚಿನಗಾಗಿ ಹುಡುಕಾಟ ನಡೆಸಲಾಗ್ತಿದೆ. ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ರು ತನಿಖೆ ನಡೆಸ್ತಿದ್ದಾರೆ.