ಉಡುಪಿ: ನ್ಯೂಮೇನಿಯಾದಿಂದ ಬಳಲುತ್ತಿದ್ದ 88 ವರ್ಷದ ಪೇಜಾವರ ವಿಶ್ವೇಶ್ವರತೀರ್ಥ ಸ್ವಾಮೀಜಿ ಅವರು ಇಹಲೋಕ ಯಾತ್ರೆಯನ್ನ ಮುಗಿಸಿದ್ದಾರೆ. ಉಡುಪಿಯ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತದ್ದ ಶ್ರೀಗಳ ಮೆದುಳು ನಿಷ್ಕ್ರಿಯಗೊಂಡಿದ್ದ ಕಾರಣಕ್ಕೆ ಮಠಕ್ಕೆ ಸ್ಥಳಾಂತರಿಸಲಾಗಿತ್ತು. ಶ್ರೀಗಳ ಅಂತಿಮ ಆಸೆಯಂತೆ ಅವರನ್ನ ಮಠಕ್ಕೆ ಕರೆತರಲಾಗಿದೆ ಅಂತಾ ಕಿರಿಯ ಶ್ರೀಗಳು ಹೇಳಿದ್ರು.
ಸಿಎಂ ಬಿ.ಎಸ್ ಯಡಿಯೂರಪ್ಪ ನಿನ್ನೆಯಿಂದ ಉಡುಪಿಯಲ್ಲಿದ್ದು ಶ್ರೀಗಳ ಆರೋಗ್ಯದ ಕುರಿತು ಕ್ಷಣ ಕ್ಷಣದ ಮಾಹಿತಿಯನ್ನ ಪಡೆದುಕೊಳ್ತಿದ್ರು. ಹೀಗಾಗಿ ಅವರ ಭಾನುವಾರದ ಕಾರ್ಯಕ್ರಮಗಳನ್ನ ರದ್ದು ಮಾಡಿ ಉಡುಪಿಯಲ್ಲಿ ಉಳಿದಿದ್ದಾರೆ. ಅಲ್ದೇ, ಕಳೆದ ಎರಡು ದಿನಗಳಿಂದ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ರು. ಇಂದು ಬೆಳಗ್ಗೆ ತೀವ್ರ ಉಸಿರಾಟದಿಂದ ಕೊನೆಯುಸಿರೆಳೆದಿದ್ದಾರೆ.