ಪ್ರಜಾಸ್ತ್ರ ಸುದ್ದಿ
ಮೈಸೂರು: ರಾಜ್ಯ ಸರ್ಕಾರದ ವಿರುದ್ಧ ಭರ್ಜರಿ ವಾಗ್ದಾಳಿ ನಡೆಸುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಇದೀಗ ಪೆನ್ ಡ್ರೈವ್ ರಹಸ್ಯದ ಬಗ್ಗೆ ಮಾತನಾಡಿದ್ದಾರೆ. ಅದೇನಾದರೂ ಹೊರ ಬಂದರೆ ಒಬ್ಬ ಸಚಿವ ರಾಜೀನಾಮೆ ಕೊಡಬೇಕಾಗುತ್ತೆ ಅಂತಾ ಹೇಳಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿ ಇಲ್ಲಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಎಸ್ಆರ್ ಟಿಸ್ ಬಸ್ ಚಾಲಕ ಜಗದೀಶ್ ಆರೋಗ್ಯ ವಿಚಾರಿಸಲು ಬಂದಾಗ ಮಾಧ್ಯಮದವರೊಂದಿಗೆ ಮಾತನಾಡಿದರು. ಪೆನ್ ಡ್ರೈವ್ ಬಗ್ಗೆ ಸರ್ಕಾರ ಹಾಗೂ ಎಲ್ಲರೂ ಕೇಳುತ್ತಿದ್ದಾರೆ. ಇದೊಂದು ಹಿಟ್ ಅಂಡ್ ರನ್ ಅಂತಿದ್ದಾರೆ. ಈಗ ನಾನು ಏನು ಹೇಳುವುದಿಲ್ಲ. ಸೂಕ್ತ ಸಮಯ ನೋಡಿಕೊಂಡು ದಾಖಲೆ ಬಿಡುಗಡೆ ಮಾಡುತ್ತೇನೆ ಅಂತಾ ಸರ್ಕಾರಕ್ಕೆ ಎಚ್ಚರಿಸಿದರು.
ಇನ್ನು ಆತ್ಮಹತ್ಯೆಗೂ ಮೊದಲು ಜಗದೀಶ್ ಡೆತ್ ನೋಟ್ ನಲ್ಲಿ ಎಲ್ಲವನ್ನು ಬರೆದಿದ್ದಾನೆ. ಈ ಕುರಿತು ತನಿಖೆಯಾಗಬೇಕು. ಸಿಎಂ ಆ ಮಂತ್ರಿಯನ್ನು ವಜಾ ಮಾಡಬೇಕು. ಸದನದಲ್ಲಿ ನಾನು ಇದರ ಬಗ್ಗೆ ಮಾತನಾಡುತ್ತೇನೆ ಅಂತಾ ಹೇಳಿದರು.