ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತಕ್ಕೆ ಮತ್ತೆ ಅದರ ಹಿಂದಿನ ಶಕ್ತಿ ತುಂಬಲಾಯಿತು. ಇದನ್ನು ಪ್ರಶ್ನಿಸಿ ಪೊಲೀಸ್ ಮಹಾಸಂಘ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಇದನ್ನು ವಜಾ ಮಾಡಿದೆ.
ಎಸಿಬಿ ರದ್ದುಗೊಂಡಿರುವುದರಿಂದ ನಿಮಗೇನು ಸಮಸ್ಯೆಯಾಗಿದೆ? ನೀವು ಯಾರು? ನೀವೇನು ಸಂತಸ್ತರೆ ಪ್ರಶ್ನಿಸಿದೆ. ಏನೇ ಆಕ್ಷೇಪಣೆ ಇದ್ದರೆ ಸಂಬಂಧಪಟ್ಟವರು, ರಾಜ್ಯ ಸರ್ಕಾರ ಸಲ್ಲಿಸುತ್ತೆ. ಹೀಗೆ ಯಾರ್ಯಾರೋ ಅರ್ಜಿ ಹಾಕಲು ಬರಲ್ಲ. ಕಕ್ಷಿದಾರರಿಗೆ ತಿಳಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತು.
ಹೈಕೋರ್ಟ್ ಆದೇಶದ ಮೇರೆಗೆ ಸೆಪ್ಟೆಂಬರ್ 9, 2022ರಂದು ಅಧಿಕೃತವಾಗಿ ಎಸಿಬಿಯನ್ನು ರದ್ದುಗೊಳಿಸಿ, ಅಲ್ಲಿ ಬಾಕಿಯಿದ್ದ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಲಾಯಿತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಲೋಕಾಯುಕ್ತ ತೆಗೆದು ಎಸಿಬಿ ರಚನೆ ಮಾಡಲಾಗಿತ್ತು.