ಪ್ರಜಾಸ್ತ್ರ ಸುದ್ದಿ
ಅಥಣಿ: ಇಂದು ಪ್ರಧಾನಿ ಮೋದಿ ಅವರ 70ನೇ ಜನುಮ ದಿನದ ಸಂಭ್ರಮ. ಹೀಗಾಗಿ ಬಿಜೆಪಿ ಕಾರ್ಯಕರ್ತರು, ಅವರ ಅಭಿಮಾನಿಗಳು ಒಂದಲ್ಲ ಒಂದು ಕಾರ್ಯಗಳನ್ನ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬಿಜೆಪಿ ಕಾರ್ಯಕರ್ತರು ರಕ್ತದಾನ ಶಿಬಿರ ನಡೆಸಿದ್ರು.
ತಾಲೂಕಿನ ಹಲ್ಯಾಳ ಗ್ರಾಮದ ಗುರುಸಿದ್ದೇಶ್ವರ ವಿರಕ್ತ ಮಠದಲ್ಲಿ ಸ್ವಾಮೀಜಿಗಳ ಸಮ್ಮುಖದಲ್ಲಿ ಜನುಮ ದಿನ ಆಚರಿಸಲಾಯಿತು. ಇದೆ ವೇಳೆ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯ್ತು.
ಈ ವೇಳೆ ಅಥಣಿ ತಾಲೂಕಾ ಬಿಜೆಪಿ ಮಂಡಳಿಯ ಕಾರ್ಯದರ್ಶಿ ಮುದಕಣ್ಣಾ ಶೇಗುಣಸಿ, ಓಬಿಸಿ ಮೋರ್ಚಾ ಉಪಾಧ್ಯಕ್ಷ ಸಿದ್ದಪ್ಪ ಲೋಕುರ, ಸಂಗಮೇಶ ಇಂಗಳಿ, ಗೋಪಾಲ ಮಂಗಸೂಳಿ, ಲಕ್ಷ್ಮಣ ಬಿಸಲನಾಯಿಕ, ಮಹಾದೇವ ಬಿಸಲನಾಯಿಕ, ಚಂದ್ರಕಾಂತ ಕಾಗವಾಡ, ಶಂಕರ ಬೂಸನಾಯಿಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.