ಪ್ರಜಾಸ್ತ್ರ ಸುದ್ದಿ
ರಾಯಚೂರು: ನೂತನ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆದ್ರೆ, ಸಾಕಷ್ಟು ಗೊಂದಲದಿಂದಾಗಿ ಸಾವನ್ನಪ್ಪಿದ್ದಾರೆ ಅನ್ನೋ ಸುದ್ದಿ ಹರಿದಾಡಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ, ವೆಬ್ ಪೋರ್ಟಲ್ ಗಳಲ್ಲಿ ಸಹ ಸಾವಿನ ಸುದ್ದಿ ಬಂದಿದೆ ತಡ, ರಾಜಕೀಯ ನಾಯಕರು, ಅಭಿಮಾನಿಗಳು ಸಂತಾಪ ಸೂಚಿಸಿದ್ರು.
ಗಸ್ತಿ ನಿಧನದ ಸುದ್ದಿ ಸುಳ್ಳಾಗಿದ್ದು, ಇದ್ರಿಂದ ಕುಟುಂಬಸ್ಥರಿಗೆ ಬೇಸರವಾಗಿದೆ. ಅವರ ನಿಧನದ ಸುದ್ದಿ ಸುಳ್ಳಾಗಿರುವುದ್ರಿಂದ ಎಚ್ಚೆತ್ತುಕೊಂಡು ಮುಖಂಡರು, ಅವರಿಗೆ ಮರುಜನುಮ ಸಿಗಲಿ. ಬೇಗ ಗುಣಮುಖರಾಗಲಿ ಎಂದು ಹೇಳಿದ್ರು. ಗಸ್ತಿ ಅವರ ನಿಧನದ ಬಗ್ಗೆ ಪ್ರಜಾಸ್ತ್ರ ಸಹ ಸುದ್ದಿ ಮಾಡಿದ್ದು, ಕುಟುಂಬಸ್ಥರಲ್ಲಿ ಕ್ಷಮೆ ಕೇಳುತ್ತಿದೆ.