ತುಮಕೂರು: ಪ್ರಧಾನಿ ಮೋದಿ ಇಂದು ತುಮಕೂರಿಗೆ ಭೇಟಿ ನೀಡ್ತಿರುವ ಹೊತ್ತಿನಲ್ಲಿ ಕರ್ನಾಟಕ ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಪ್ರಧಾನಿ ಕಾಲೆಳೆದಿದೆ. ಈ ಹಿಂದೆ ತುಮಕೂರಿಗೆ ಭೇಟಿ ನೀಡಿದ್ದಾಗ ನೀಡಿದ ಆಶ್ವಾಸನೆಗಳು ಏನಾದ್ವು ಅನ್ನೋ ದಾಟಿಯಲ್ಲಿ ಪ್ರಶ್ನೆ ಮಾಡಲಾಗಿದೆ.
ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದಾಗ ತುಮಕೂರಿಗೆ ಏಕೆ ಬರಲಿಲ್ಲ ಎಂದು ಕೇಳಿದೆ. ಪತ್ರ ಬರೆದಿದ್ರೂ ಶ್ರೀಗಳಿಗೆ ಭಾರತ ರತ್ನ ನೀಡಿಲ್ಲವೇಕೆ ಎಂದು ಕೇಳಲಾಗಿದೆ.