ಶಿರಸಿ: ಹಣದಾಸೆಯಿಂದ ಮನೆಯಲ್ಲಿಯೇ ಅಕ್ರಮ ವೇಶ್ಯಾವಾಟಿಕೆ ನಡೆಸ್ತಿದ್ದ ನಾಲ್ವರನ್ನ ಅರೆಸ್ಟ್ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿಯ ಮರಾಠಿಕೊಪ್ಪದಲ್ಲಿನ ಮನೆಯೊಂದರ ಮೇಲೆ ದಾಳಿ ಮಾಡಿದ ಪೊಲೀಸ್ರು ನಾಲ್ವರನ್ನ ಅರೆಸ್ಟ್ ಮಾಡಿದ್ದಾರೆ.
ರಾಮಚಂದ್ರ ನಾಯ್ಕ, ಸಾವಿತ್ರಿ ಭಟ್, ಹುಬ್ಬಳ್ಳಿಯ ಲಕ್ಷ್ಮಿಕಾಂತ ನಾಯ್ಕ ಹಾಗೂ ಆನಂದ ರೋಣಿಮಠ ಎಂಬುವರನ್ನ ಬಂಧಿಸಲಾಗಿದೆ. ಇದೇ ವೇಳೆ ಇಬ್ಬರು ಯುವತಿಯರನ್ನ ರಕ್ಷಿಸಲಾಗಿದೆ.