ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನಮ್ಮ ತಪ್ಪಿನಿಂದಾಗಿ ಪಂಜಾಬ್ ನಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ. ಅಲ್ಲೇನು ಬಿಜೆಪಿ ಬಂದಿಲ್ಲ. ಆಪ್ ಬಂದಿದೆ. ಜನರು ನೀಡಿರುವ ತೀರ್ಪಿಗೆ ತಲೆ ಬಾಗಬೇಕು. ನಾನು ಉತ್ತರ ಪ್ರದೇಶ, ಮಣಿಪುರ, ಗೋವಾದಲ್ಲಿ ಅಧಿಕಾರದಲ್ಲಿ ಇರಲಿಲ್ಲ ಎಂದರು.
ಫಲಿತಾಂಶದಿಂದ ಧೈರ್ಯ ಕಳೆದುಕೊಳ್ಳಬೇಕಾಗಿಲ್ಲ. ಇದರಿಂದ ಬಿಜೆಪಿ ಜಂಭ ಪಡುವ ಅಗತ್ಯವಿಲ್ಲ. ಈ ಹಿಂದೆ ಯುಪಿಯಲ್ಲಿ 7 ಸ್ಥಾನಗಳಿದ್ದವು. ಇದೀಗ 4 ಸ್ಥಾನಗಳು ಬಂದಿವೆ. ಅಲ್ಲಿ ಮೊದಲಿನಿಂದಲೂ ನಮ್ಮ ನಿರೀಕ್ಷೆ ಇಲ್ಲ ಎಂದರು.