ನಾದ ಕೆ.ಡಿ ಕ್ವಾರಂಟೈನ್ ನಲ್ಲಿ ಕಳಪೆ ಆಹಾರ ವಿತರಣೆ ಮಾಡಲಾಗ್ತಿದ್ಯಾ?

371

ಪ್ರಜಾಸ್ತ್ರ ಸುದ್ದಿ

ಇಂಡಿ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ನಾದ ಕೆ.ಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಂಸ್ಥಾ ಕ್ವಾರಂಟೈನ್ ನಲ್ಲಿರುವ ಜನರಿಗೆ, ಕಳಪೆ ಗುಣಮುಟ್ಟದ ಆಹಾರ ನೀಡಲಾಗ್ತಿರುವ ಆರೋಪ ಕೇಳಿ ಬಂದಿದೆ.

ನಾದ ಕೆ.ಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಾರಾಷ್ಟ್ರದ ಕರಾಡ, ಪುಣೆಯಿಂದ ಬಂದಂತಹ ಜನರಿಗೆ  ಕ್ವಾರಂಟೈನ್ ಮಾಡಲಾಗಿದೆ. ಇವರಿಗೆಲ್ಲರಿಗೂ ಕಳಪೆ ಗುಣಮಟ್ಟದ ಅನ್ನ, ಸಾಂಬರ ತಯಾರಿಸಿ ಒಂದೇ ರಟ್ಟಿನ ಬಾಕ್ಸನಲ್ಲಿ  ವಿತರಣೆ ಮಾಡಲಾಗುತ್ತಿದೆ ಎಂದು ಹೇಳಲಾಗ್ತಿದೆ.

ರಟ್ಟಿನ ಡಬ್ಬಿಯಲ್ಲಿ ಪೂರೈಕೆ ಮಾಡುವ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳುತ್ತಿದೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸವಂತೆ ಕ್ವಾರಂಟೈನ್ ನಲ್ಲಿರುವ ಜನರು ಆಗ್ರಹಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!