ಬಬಲೇಶ್ವರದಲ್ಲಿ ಚಿರತೆ ದಾಳಿ: ಜನರಲ್ಲಿ ಆತಂಕ

403

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೆಲ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಹೇಳಲಾಗ್ತಿದೆ. ಪ್ರಶಾಂತ ದೇಸಾಯಿ ಎಂಬುವರು ಚಿರತೆಯನ್ನ ನೋಡಿದ್ದಾರೆ ಎಂದು ಹೇಳಲಾಗ್ತಿದೆ. ಹೀಗಾಗಿ ಜನರಲ್ಲಿ ಆತಂಕ ಮೂಡಿದೆ.

ತಾಲೂಕಿನ ಸುತಗುಂಡಿ, ದೇವರಗೆಣ್ಣೂರ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಎಮ್ಮೆ, ಕುರಿ ಮೇಲೆ ದಾಳಿ ಮಾಡಲಾಗಿದೆಯಂತೆ. ಮೂಕಪ್ರಾಣಿಗಳ ಚೀರಾಟ ಕೇಳಿದ ಜನರು ಕೂಗಾಡಿದಾಗ ಚಿರತೆ ಕಬ್ಬಿನ ಗದ್ದೆಯೊಳಗೆ ಹೋಗಿದೆ ಎಂದು ಗ್ರಾಮಸ್ಥರು ಹೇಳ್ತಿದ್ದಾರೆ.

ಮಮದಾಪುರ ವಲಯ ಅರಣ್ಯಾಧಿಕಾರಿ ಪ್ರಭು ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು, ಚಿರತೆಯಲ್ಲ ಕತ್ತೆಕಿರುಬ ಬಂದಿರುವ ಸಾಧ್ಯತೆಯಿದೆ ಎಂದು ಶಂಕಿಸಿದ್ದಾರೆ. ಅರಣ್ಯ ಸಿಬ್ಬಂದಿಯ ಕಾರ್ಯಾಚರಣೆ ಬಳಿಕ, ಬಂದಿರುವುದು ಚಿರತೆಯೋ ಅದರಂತೆ ಕಾಣುವ ಕತ್ತೆಕಿರುಬವೋ ಅನ್ನೋದು ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!