ಬೆಳಗಾವಿ: ನಕಲಿ ನೋಟು ಸಾಗಾಟ ಮಾಡ್ತಿದ್ದ ಐವರು ಅಂತಾರಾಜ್ಯ ಕಳ್ಳರನ್ನ ಬಂಧಿಸಲಾಗಿದೆ. ಹುಕ್ಕೇರಿ ತಾಲೂಕಿನ ಕಮತನೂರ ಕ್ರಾಸ್ ಬಳಿ ಎರಡು ವಾಹನಗಳಲ್ಲಿ ಸಾಗಿಸ್ತಿದ್ದ 23.88 ಲಕ್ಷದ ನಕಲಿ ನೋಟುಗಳನ್ನ ವಶಕ್ಕೆ ಪಡೆಯಲಾಗಿದೆ.
ಕೊಲ್ಹಾಪುರದ ಅಮರ ಅಂಬೇಕರ್, ಬಾಚಲಿ ಗ್ರಾಮದ ಧೈರ್ಯಶೀಲ ಪಾಟೀಲ, ಬಾಬಾಸೋ ಪಾಟೀಲ, ಚಿಕ್ಕೋಡಿ ತಾಲೂಕಿನ ಕಲ್ಲೊಳ ಗ್ರಾಮದ ಅಶೋಕ ತೇಲಿ ಹಾಗೂ ನಿಪಾಣಿಯ ರಾಜೇಶ ಮೋಹಿತೆ ಅನ್ನೋ ಐವರು ಅಂತಾರಾಜ್ಯ ಕಳ್ಳರನ್ನ ಬಂಧಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಪೊಲೀಸ್ರು ದಾಳಿ ನಡೆಸಿದಾಗ ಐವರು ಸಿಕ್ಕಿಬಿದ್ದಿದ್ದಾರೆ. ಈ ವೇಳೆ 12 ಸಾವಿರ ಅಸಲಿ ನೋಟು, 23.88 ಲಕ್ಷ ನಕಲಿ ನೋಟು, ಬುಲೆರೋ ಜೀಪ್, ಸುಜುಕಿ ಸ್ವಿಪ್ಟ್ ಕಾರ್ ಹಾಗೂ 5 ಮೊಬೈಲ್ ಗಳನ್ನ ವಶಕ್ಕೆ ಪಡೆಯಲಾಗಿದೆ.