ಅಥಣಿ: ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಹಳ್ಳಿ ಹೋಬಳಿಗಳಲ್ಲಿ ಗುಡುಗು ಸಹಿತ ಭರ್ಜರಿ ಮಳೆಯಾಗ್ತಿದೆ. ಕಳೆದ ಎರಡು ದಿನಗಳಿಂದ ಸಂಜೆ ಹೊತ್ತಿಗೆ ಆಲಿಕಲ್ಲು ಮಳೆಯಾಗ್ತಿದೆ.
ನಿನ್ನೆ ಬಿರುಗಾಳಿ ಸಮೇತ ಸುರಿದ ಮಳೆ ಪರಿಣಾಮದಿಂದ ಪಟ್ಟಣದ ವಿಕ್ರಮಪುರದ 23ನೇ ವಾರ್ಡನಲ್ಲಿರುವ ಬೀದಿ ದೀಪದ ಕಂಬವೊಂದು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇನ್ನು ವಿವಿಧ ಹಳ್ಳಿ ಹೊಬಳಿಗಳಲ್ಲಿಯೂ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಅಕಾಲಿಕ ಮಳೆ ಸುರಿದಿದೆ. ಜೋರಾದ ಗಾಳಿಯೊಂದಿಗೆ ಅಬ್ಬರಿಸಿದ ವರುಣ ಭೂಮಿಗೆ ತಂಪೆರೆದಿದ್ದಾರೆ. ಆದ್ರೆ, ಒಣ ದ್ರಾಕ್ಷಿ ತಯಾರಿಕೆ ಶೆಡ್ಡಗಳಲ್ಲಿದ್ದ ದ್ರಾಕ್ಷಿ ಮಳೆಗೆ ತೊಯ್ಯಬಾರದೆಂದು ರೈತರು ಪ್ಲಾಸ್ಟಿಕ್ ಚಪ್ಪರ ಹಾಕಿ ರಕ್ಷಿಸುವಲ್ಲಿ ತುಂಬಾ ಕಷ್ಟ ಪಡುವಂತಾಯಿತು.