ಮಂಗಳೂರು: ನಗರದ ಹಲವು ಕಡೆ ಇಂದು ಮುಂಜಾನೆ ಮಳೆಯಾಗಿದೆ. ಈ ಮೂಲಕ ನಗರ ಹಾಗೂ ಹೊರವಲಯದಲ್ಲಿ ವರುಣದೇವ ಕಾಣಸಿಕೊಳ್ಳುವ ಮೂಲಕ, ಒಂದಿಷ್ಟು ತಂಪೆರೆದಿದ್ದಾನೆ.
ಪಂಡಿತಹೌಸ್, ತೊಕ್ಕಟ್ಟು, ದೇರಳಕಟ್ಟೆ ಸೇರಿದಂತೆ ನಗರದ ಸುತ್ತಮುತ್ತ ಭರ್ಜರಿ ಮಳೆಯಾಗಿದೆ. ಇನ್ನು ಕೆಲವು ಕಡೆ ನಿನ್ನೆ ರಾತ್ರಿಯೇ ಮಳೆಯಾಗಿದೆ. ಕರಾವಳಿ ಭಾಗದಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ನಡುವೆಯೇ ಮಳೆಯಾಗಿದೆ.
ಸಾಂದರ್ಭಿಕ ಚಿತ್ರ