ಸಿಂದಗಿಯಲ್ಲಿ ಒಂದಿಷ್ಟು ಮಳೆ: ರೈತವರ್ಗದಲ್ಲಿಲ್ಲ ಸಂತಸ

447

ಸಿಂದಗಿ: ಪಟ್ಟಣದಲ್ಲಿ ಇಂದು ಸಂಜೆ ಸುರಿದ ಮಳೆಯಿಂದಾಗಿ ಒಂದಿಷ್ಟು ತಂಪಾದಂತಾಗಿದೆ. ಆಗಸ್ಟ್ ತಿಂಗಳಲ್ಲಿ ಸಂಪೂರ್ಣ ಮಳೆ ಕೈಕೊಟ್ಟಿದ್ದು ಇದ್ರಿಂದ ಮುಂದೇನು ಅನ್ನೋ ಚಿಂತೆಯಲ್ಲಿ ರೈತವರ್ಗ ಕುಳ್ತಿದೆ. ಇಂದು ಸುರಿದ ಮಳೆ ಸಹ ಮೂಗಿಗೆ ಬೆಣ್ಣೆ ಸವರಿದಂತಾಗಿದೆ.

ಒಂದ್ಕಡೆ ಪ್ರವಾಹ ಇನ್ನೊಂದ್ಕಡೆ ಬರಗಾಲ ಆಗಿದೆ. ಹೀಗಾಗಿ ವಿಜಯಪುರ ಜಿಲ್ಲೆಯ ಜನ ಮಳೆಗಾಗಿ ಎದುರು ನೋಡ್ತಿದ್ದಾರೆ. ಮಳೆ ಕೊರತೆಯಿಂದಾಗಿ ಹೆಸರು, ಜೋಳ, ಹತ್ತಿ, ಸೂರ್ಯಕಾಂತಿ, ಶೇಂಗಾ, ಮೆಕ್ಕೆಜೋಳ ಸೇರಿದಂತೆ ಕೆಲ ಬೆಳೆಗಳ ಬಿತ್ತನೆ ಕಾರ್ಯ ಕೆಲವು ಕಡೆ ಮಾಡಲಾಗ್ತಿದೆ. ಆದ್ರೆ, ಸಿಂದಗಿ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಇನ್ನು ಬಿತ್ತನೆ ಕಾರ್ಯ ಸಹ ಶುರುವಾಗಿಲ್ಲ. ಹೀಗಾಗಿ ಜನರು ಮಳೆಯ ನಿರೀಕ್ಷೆಯಲ್ಲಿದ್ದಾರೆ.

ಇಂದು ಸಂಜೆ ಸುರಿದ ಮಳೆ ಜನರಿಗೆ ಅಷ್ಟಾಗಿ ಖುಷಿ ನೀಡಿಲ್ಲ. ನಿರಂತರವಾಗಿ ಒಂದಿಷ್ಟು ದೊಡ್ಡ ದೊಡ್ಡ ಮಳೆಯನ್ನ ಎದುರು ನೋಡಲಾಗ್ತಿದೆ. ಇನ್ಮೇಲಾದ್ರೂ ಒಂದಿಷ್ಟು ಮಳೆ ಬರುತ್ತಾ ಅಂತಾ ಜನ ಕಾಯುತ್ತಿದ್ದಾರೆ. ಒಂದು ವೇಳೆ ಈ ಬಾರಿಯೂ ಮಳೆ ಕೈಕೊಟ್ರೆ ಈ ಭಾಗದ ಜನರ ಪರಿಸ್ಥಿತಿ ಮತ್ತಷ್ಟು ಹೈರಾಣಾಗುವುದ್ರಲ್ಲಿ ಯಾವುದೇ ಅನುಮಾನವಿಲ್ಲ.




Leave a Reply

Your email address will not be published. Required fields are marked *

error: Content is protected !!