ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಟಾಲಿವುಡ್ ನಿರ್ದೇಶಕ ರಾಜಮೌಳಿ ವಿರುದ್ಧ ಸ್ಯಾಂಡಲ್ ವುಡ್ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕಿಡಿ ಕಾರಿದ್ದಾರೆ. ಫೇಸ್ ಬುಕ್ ನಲ್ಲಿ ಮೌಳಿ ವಿರುದ್ಧ ಹರಿಹಾಯ್ದಿರುವ ಸಿಂಗ್, ಕರೋನಾ ಲಾಕ್ ಡೌನ್ ನಿಂದ ಸಿನಿಮಾ ರಂಗ ಮೂರು ತಿಂಗಳಿನಿಂದ ಬಂದ್ ಆಗಿದೆ. ಕರ್ನಾಟಕದಿಂದ ಆದಾಯ ನಿರೀಕ್ಷೆ ಮಾಡೋ ರಾಜಮೌಳಿ ಸಹಾಯ ಮಾಡದ ಸ್ವಾರ್ಥಿ ಎಂದಿದ್ದಾರೆ.
ಸಿನಿಮಾದವರು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಆದ್ರೆ, ತಮ್ಮ ಸಿನಿಮಾ ಬಿಡುಗಡೆ ವೇಳೆ ನಾನು ಕರ್ನಾಟಕದವನು. ನನ್ನದು ರಾಯಚೂರು, ನಾನು ಕನ್ನಡಿಗ ಎಂದೆಲ್ಲ ಪೋಸ್ ಕೊಡುವ ಮೌಳಿ ಸ್ವಾರ್ಥಿ. ರಾಜಕುಮಾರ ಅವರ ಎಷ್ಟೋ ಚಿತ್ರಗಳ ಕಥೆಯನ್ನ, ಕನ್ನಡ ಕಾದಂಬರಿಗಳ ಕಥೆಯನ್ನ ಕದ್ದು ತನ್ನದು ಎಂದು ಬಿಂಬಿಸಿಕೊಳ್ತಿದ್ದಾರೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪೋಸ್ಟ್ ಮಾಡಿದ್ದಾರೆ.
ನಾನು ಸತ್ಯಾಂಶ ಹೇಳಿದ್ದೇನೆ. ಮೌಳಿ ವಿರುದ್ಧ ಹೇಳಿಕೆ ನೀಡಿಲ್ಲ. ಸಿನಿಮಾ ಬಿಡುಗಡೆ ಹೊತ್ತಲ್ಲಿ ಕರ್ನಾಟಕ ಅಂತಾರೆ. ನೆರೆ ಬಂದಾಗ ಸಹಾಯ ಮಾಡ್ಲಿಲ್ಲ. ಕರೋನಾ ಟೈಂನಲ್ಲಿಯೂ ಸಹಾಯ ಮಾಡ್ಲಿಲ್ಲ. ಈಗ ದೊಡ್ಡದಾಗಿ ನಾವು ಕನ್ನಡಿಗರು ಎಂದು ಬೋರ್ಡ್ ಹಾಕೋತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.