ಪ್ರಜಾಸ್ತ್ರ ಸುದ್ದಿ
ನವದೆಹಲಿ: ಜೂನ್ 19ರಂದು ನಡೆಯಲಿರುವ ರಾಜ್ಯಸಭೆ ಸ್ಥಾನಗಳ ಚುನಾವಣೆಗೆ ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ ಫಿಕ್ಸ್ ಆಗಿದ್ದಾರೆ. ಜೂನ್ 25ರಂದು ರಾಜ್ಯದಲ್ಲಿನ ನಾಲ್ಕು ಸ್ಥಾನಗಳ ಅವಧಿ ಮುಗಿಯಲಿವೆ. ಹೀಗಾಗಿ ಭರ್ಜರಿ ಪೈಪೋಟಿ ನಡೆದಿದೆ. ಇದರ ನಡುವೆ ಕಾಂಗ್ರೆಸ್, ಖರ್ಗೆ ಸ್ಪರ್ಧೆಯನ್ನ ಖಚಿತ ಪಡಿಸಿದೆ.
ರಾಜ್ಯದಲ್ಲಿ ಪ್ರಭಾಕರ ಕೋರೆ, ಬಿ.ಕೆ ಹರಿಪ್ರಸಾದ, ಕುಪೇಂದ್ರ ರೆಡ್ಡಿ ಹಾಗೂ ರಾಜೀವಗೌಡ ಎಂ.ವಿ ಅವರ ಅಧಿಕಾರದವಧಿ ಮುಗಿಯುತ್ತಿದ್ದು, ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಿಂದ ಭರ್ಜರಿ ಪೈಪೋಟಿ ನಡೆದಿರುವ ಹೊತ್ತಿನಲ್ಲಿ ಖರ್ಗೆ ಹೆಸರನ್ನ ಕಾಂಗ್ರೆಸ್ ಪೈನಲ್ ಮಾಡಿದೆ.
ಕೇಂದ್ರ ಚುನಾವಣೆ ಆಯೋಗ ಜೂನ್ 2ರಿಂದ ಅನ್ವಯವಾಗುವಂತೆ ಅಧಿಸೂಚನೆ ಹೊರಡಿಸಿದೆ. ಜೂನ್ 9 ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕ. ಜೂನ್ 10 ನಾಮಪತ್ರ ಪರಿಶೀಲನೆ. ಜೂನ್ 12 ವಾಪಸ್ ಪಡೆಯುವ ದಿನಾಂಕ. ಜೂನ್ 19ರಂದು ಕರ್ನಾಟಕದ 4, ಅರುಣಾಚಲ ಪ್ರದೇಶ 1 ಹಾಗೂ ಮಿಜೋರಾಂ 1 ಸ್ಥಾನಕ್ಕೆ ಎಲೆಕ್ಷನ್ ನಡೆಯಲಿದೆ. ಅದೆ ದಿನ ಸಂಜೆ 5ಕ್ಕೆ ಮತ ಎಣಿಕೆ ನಡೆಯಲಿದೆ.