ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿನ ಇತ್ತೀಚಿನ ಘಟನೆಗಳ ಬಗ್ಗೆ ಮಾತ್ನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಈ ರೀತಿ ಘಟನೆಗಳನ್ನು ನೋಡಿರ್ಲಿಲ್ಲ. ರಾಜಕಾರಣಿಗಳು ಅಂದ್ರೆ ಲಫಂಗರು ಅನ್ನೋ ಹಾಗೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೋರ್ಟ್ ಮೊರೆ ಹೋಗಿರುವವರ ಬಗ್ಗೆ ಮಾತ್ನಾಡಿದ ಅವರು, ಸಿಡಿ ಇದೆ ಎಂದು ಗೊತ್ತಿದ್ರೆ ಮಾತ್ರ ರಾಜಕೀಯ ಷಡ್ಯಂತ್ರ ಇದೆ ಎನ್ನಲಾಗ್ತಿದೆ. ಸುಧಾಕರ ಅವರದು ಸಿಡಿ ಇದೆಯಾ ಎಂದು ಪ್ರಶ್ನಿಸಿದ್ರು. ಕೆಲವರು ಮಾಡುವ ತಪ್ಪುಗಳಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತಿದೆ ಎಂದರು.