ನಟ ಕಿಚ್ಚ ಸುದೀಪ ಇದೀಗ ಲಾಯರ್ ಆಗಿದ್ದಾರೆ. ಕರಿಕೋಟ್ ಹಾಕಿಕೊಂಡು ವಾದ ಮಾಡಲು ಸಜ್ಜಾಗಿರುವ ಕಿಚ್ಚ ಸುದೀಪ, ನಟ ರವಿಚಂದ್ರನ್ ಬಗ್ಗೆ ಹಾಡಿ ಹೊಗಳಿದ್ದಾರೆ. ಅವರ ನಿರ್ದೇಶನದಲ್ಲಿ ನಟಿಸುವುದೆ ನನ್ನ ಅದೃಷ್ಟ ಎಂದಿದ್ದಾರೆ.
ಯೆಸ್, ರವಿ ಬೋಪಣ್ಣ ಸಿನಿಮಾದಲ್ಲಿ ಸುದೀಪ ಲಾಯರ್ ಆಗಿದ್ದಾರೆ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಬಳಿ ಶೂಟಿಂಗ್ ನಡೆಯುತ್ತಿದ್ದ ಈ ವೇಳೆ ರವಿಮಾಮನ ಬಗ್ಗೆ ಮೆಲುಕು ಹಾಕಿದ್ದಾರೆ. ಒಂದು ಕಾಲದಲ್ಲಿ ರವಿಚಂದ್ರನ್ ಅವರ ಸಿನಿಮಾದಲ್ಲಿ ನಟಿಸಲು ನಾನು ಸೇರಿದಂತೆ ಅನೇಕರು ಸರದಿ ಸಾಲಿನಲ್ಲಿ ಕಾಯುತ್ತಿದ್ದೇವೆ ಅಂತಾ ಹೇಳಿದ್ದಾರೆ.
ರವಿ ಬೋಪಣ್ಣ ಸಿನ್ಮಾದಲ್ಲಿ ನಟಿಸಲು ಕೇಳಿದ್ರು. ತಕ್ಷಣ ಒಪ್ಪಿಕೊಂಡೆ. ಅವರ ಅಪೂರ್ವ ಚಿತ್ರದಲ್ಲಿಯೂ ನಟಿಸಿದ್ದೆ. ಇದರಲ್ಲಿಯೂ ನಟಿಸ್ತಿದ್ದೇನೆ. ಅವರಿಬ್ಬರ ಮಕ್ಕಳಿಗೂ ಸಿಗದ ಅದೃಷ್ಣ ನನ್ಗೆ ಸಿಕ್ಕಿದೆ ಅಂತಾ ನಟ ಕಿಚ್ಚ ಸುದೀಪ ಹೇಳಿದ್ದಾರೆ. ಈ ಚಿತ್ರವನ್ನ ನಿರ್ದೇಶನ ಮಾಡುವುದ್ರ ಜೊತೆಗೆ ನಟನೆ ಸಹ ರವಿಚಂದ್ರನ್ ಅವರು ಮಾಡ್ತಿದ್ದಾರೆ.