ಕುಂಭಕರ್ಣ ನಿದ್ದೆಗೆ ಜಾರಿದ ಸಿಂದಗಿ ಅಧಿಕಾರಿಗಳು..!

357

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಇಲ್ಲಿನ ಫೋಟೋಗಳನ್ನು ನೋಡಿದರೆ ತಿಳಿಯುತ್ತೆ ಸರಿಯಾದ ರಸ್ತೆಯಿಲ್ಲವೆಂದು. ಮಳೆ ಬಂದರೆ ಕೆಸರು ಗದ್ದೆ.. ಇಲ್ಲಂದರೆ ಧೂಳಿನ ಮಜ್ಜನ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಶಾಲೆಗೆ ಹೋಗಬೇಕು. ಒಂದು ಊರಿಗೆ ಮೂಲ ಸೌಕರ್ಯ ನೀಡುವಲ್ಲಿ ಸರ್ಕಾರ, ಅಧಿಕಾರಿಗಳು ಎಷ್ಟೊಂದು ವಿಫಲರಾಗಿದ್ದಾರೆ ಅನ್ನೋದಕ್ಕೆ ಇಂತಹ ದೃಶ್ಯಗಳು ಸಾಕ್ಷಿ.

ಅಂದ್ಹಾಗೆ ಇದು ಸಿಂದಗಿ ಪಟ್ಟಣದಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಹೋಗುವ ರಸ್ತೆ. ಈ ಶಾಲೆಯಲ್ಲಿ 6 ರಿಂದ 10ನೇ ತರಗತಿವರೆಗೂ 400 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇಲ್ಲಿನ ಸಮಸ್ಯೆ ಬಗ್ಗೆ ಶಾಲಾ ಆಡಳಿತ ಮಂಡಳಿ ಸೇರಿದಂತೆ ಸ್ಥಳೀಯರು ಸಂಬಂಧಪಟ್ಟವರಿಗೆ ಸಾಕಷ್ಟು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ನಿತ್ಯ ಈ ಗೋಳು ತಪ್ಪಿದ್ದಲ್ಲ.

ಕಳೆದ 11 ವರ್ಷಗಳ ಹಿಂದೆ ಸರ್ಕಾರಿ ಆದರ್ಶ ವಿದ್ಯಾಲಯ ಮಂಜೂರಾಗಿದೆ. 2016ರಲ್ಲಿ ಒಂದೊಳ್ಳೆ ಕಟ್ಟಡ ನಿರ್ಮಾಣವಾಗಿದೆ. ಶಾಲೆ ಮುಂದೆ ವಿಶಾಲವಾದ ಮೈದಾನವಿದೆ. ಆದರೆ, ಶಾಲೆ ತಲುಪಬೇಕಾದರೆ ಸರಿಯಾದ ರಸ್ತೆಯಿಲ್ಲ. ಈಗ್ಲಾದರೂ ಅಧಿಕಾರಿಗಳು ನಿದ್ದೆಯಿಂದ ಎದ್ದು ಬಂದು ಸಮಸ್ಯೆ ಬಗೆಹರಿಸಬೇಕಿದೆ ಅಂತಿದ್ದಾರೆ ಸಾರ್ವಜನಿಕರು.




Leave a Reply

Your email address will not be published. Required fields are marked *

error: Content is protected !!