ಪ್ರಜಾಸ್ತ್ರ ಅಪರಾಧ ಸುದ್ದಿ
ದೇವರಹಿಪ್ಪರಗಿ: ನಿಪ್ಪಾಣಿಯಿಂದ ಕಲಬುರಗಿಗೆ ಪಾನ್ ಮಸಾಲಾ ಹಾಗೂ ತಂಬಾಕು ಉತ್ಪನ್ನಗಳನ್ನ ಸಾಗಿಸುತ್ತಿದ್ದ ಟ್ಯಾಂಕರ್ ತಡೆದು ದರೋಡೆ ಮಾಡಲಾಗಿದೆ. ದೇವರಹಿಪ್ಪರಗಿ-ವಿಜಯಪುರ ಎನ್ಎಚ್ 50ರ ಹೆದ್ದಾರಿಯಲ್ಲಿ ಮಧ್ಯರಾತ್ರಿ ಸುಮಾರು 1.30ರ ಸಮಯದಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿ ದರೋಡೆ ಮಾಡಿದ್ದಾರೆ.
ಕೆಎ 32, ಬಿ 7660 ನಂಬರಿನ ಟ್ಯಾಂಕರ್ ತಡೆದ ಐವರು ದುಷ್ಕರ್ಮಿಗಳು ಚಾಲಕ ಮಹ್ಮದಪೀರ್ ಮಹ್ಮದ ಅಬ್ದುಲ್ ಮಣಿಯಾರ್ ಹಾಗೂ ಅಬ್ದುಲ್ ಅಜಾಕ್ ಶೇಕ್ ಎಂಬುವರಿಗೆ ಹೊಡೆದು ಹೆದರಿಸಿದ್ದಾರೆ. ಅಲ್ಲದೆ ಅಬ್ದುಲ್ ಅಜಾಕ್ ಶೇಕ್ ಅವರನ್ನ ಬುಲೆರೋ ವಾಹನದಲ್ಲಿ ಹಾಕಿಕೊಂಡು ಹೋಗಿ, ಇಂಡಿ ರಸ್ತೆಯ ಪಕ್ಕದಲ್ಲಿ ಗಾಡಿ ನಿಲ್ಲಿಸಿ ಅದರಲ್ಲಿನ 26,72,670 ರೂಪಾಯಿ ಮೌಲ್ಯದ ಪಾನ್ ಮಸಾಲಾ ಹಾಗೂ ತಂಬಾಕು ಉತ್ಪನ್ನ ದರೋಡೆ ಮಾಡಲಾಗಿದೆ.
ಈ ಘಟನೆ ಸಂಬಂಧ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಎಲ್ ಅರಸಿದ್ಧಿ, ಇಂಡಿ ಡಿವೈಎಸ್ಪಿ ಶ್ರೀಧರ ದಡ್ಡಿ, ಸಿಂದಗಿ ಸಿಪಿಐ ಹೆಚ್.ಎಂ ಪಾಟೀಲ, ಪಿಎಸ್ಐ ರವಿ ಯಡವನ್ನವರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ಮಾಡಲಾಗ್ತಿದೆ.